ಕಾಸರಗೋಡು: ಡೆಡ್ಲಿ ಕೊರೊನಾ ವೈರಸ್ ಜಗತ್ತಿನಲ್ಲಿ ತನ್ನ ಸಂಪರ್ಕಕ್ಕೆ ಬಂದವರನ್ನು ಅಪೆÇೀಶನ ತಗೆದುಕೊಳ್ಳುತ್ತಾ ಸಾಗಿದೆ. ಈಗ ಕೊರೊನಾ ಕೆಂಗೆಣ್ಣಿಗೆ ಕಾಸರಗೋಡಿನ ಕುಖ್ಯಾತ ಕಳ್ಳಸಾಗಣೆದಾರನೊಬ್ಬ ಬಿದ್ದಿದ್ದಾನೆ. ಅರಬ್ ರಾಷ್ಟ್ರಗಳಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವಲ್ಲಿ ನಿಷ್ಣಾತನಾಗಿದ್ದ 47 ವರ್ಷದ ಕಾಸರಗೋಡು ಮೂಲದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ಈ ವಿಷಯವನ್ನು ಕಾಸರಗೋಡು ಜಿಲ್ಲಾಧಿಕಾರಿಯೇ ಖಚಿತಪಡಿಸಿದ್ದು, ಸೋಂಕಿತ ವ್ಯಕ್ತಿ ಅಂತಾರಾಷ್ಟ್ರೀಯ ಕಳ್ಳ ಸಾಗಣೆದಾರನಾಗಿದ್ದು, ಆತ ದುಬೈನಿಂದ ಮರಳಿದ ನಂತರ ಸುಮಾರು ಜನರೊಡನೆ ಸಂಪರ್ಕಕ್ಕೆ ಬಂದಿದ್ದ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಆತ ಈಗ ಐಸೋಲೇಷನ್ ಘಟಕದಲ್ಲಿದ್ದಾನೆ. ಆದರೆ, ಆತ ತಾನು ಯಾರಾರನ್ನು ಭೇಟಿಯಾಗಿದ್ದ ಎಂಬುದನ್ನು ಬಾಯಿ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ದುಬೈನಿಂದ ಬಂದಿದ್ದ ಸೋಂಕಿತ ಕಳ್ಳಸಾಗಣೆದಾರ ದುಬೈನಿಂದ ಮಾರ್ಚ್ 11 ರಂದು ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಪಾಸ್ಪೆÇೀರ್ಟ್ ವಶಪಡಿಸಿಕೊಂಡು ಎರಡನೇ ಹಂತದ ತಪಾಸಣೆಗೆ ಕರೆದುಕೊಂಡು ಹೋಗಿದ್ದಾಗ, ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದ ಎಂದು ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ 19 ನಿಂದ ಆಸ್ಪತ್ರೆಗೆ ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ಮಗ್ಲರ್ ವ್ಯಕ್ತಿಗೆ (ಆತನ ಹೆಸರು ಬಹಿರಂಗಪಡಿಸಿಲ್ಲ) ಕೊರೊನಾ ಸೋಂಕು ತಪಾಸಣೆ ಮಾಡಿದ್ದಾಗ, ಕೊರೊನಾ ಇರುವುದು ದೃಢಪಟ್ಟಿದೆ. ಈಗ ಕಾಸರಗೂಡಿನ ಐಸೋಲೇಷನ್ ವಾರ್ಡ್ನಲ್ಲಿರುವ ಈ ವ್ಯಕ್ತಿಯ ಹಿಂದೆ ಇಡೀ ಕೇರಳ ಜಿಲ್ಲಾಡಳಿತವೇ ಬಿದ್ದಿದೆ.
ಬಾಯಿ ಬಿಡದ ಕಳ್ಳಸಾಗಣೆದಾರ:
ಯುಎಇ ನ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಚಿನ್ನ ಕಳ್ಳಸಾಗಾಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಭಾರತದ ಕಸ್ಟಮ್ಸ ವಿಭಾಗದಲ್ಲಿ ಈತನ ವಿರುದ್ಧ ಸುಮಾರು ಪ್ರಕರಣಗಳು ಉಲ್ಲೇಖವಾಗಿವೆ. ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದ ಈ ವ್ಯಕ್ತಿ ಈಗ ಕೊರೊನಾ ಪೀಡಿತನಾಗಿ ಆಸ್ಪತ್ರೆ ಸೇರಿದ್ದಾನೆ. ಆದರೆ, ಈ ಕಿಲಾಡಿ ಆರೋಗ್ಯ ಅಧಿಕಾರಿಗಳ ಎದುರಿಗೆ ತಾನು ಯಾರಾರನ್ನು ಭೇಟಿಯಾಗಿದ್ದೆ ಎಂಬುದನ್ನು ಬಾಯಿ ಬಿಡುತ್ತಿಲ್ಲ. ಒಂದು ವೇಳೆ ಬಾಯಿ ಬಿಟ್ಟರೆ ತನ್ನ ಚಿನ್ನ ಕಳ್ಳಸಾಗಾಣೆ ವ್ಯವಹಾರದ ಮುಖ ಎಲ್ಲಿ ಕಳಚುತ್ತದೆ ಎಂದು ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಕಾಸರಗೋಡು ಆರೋಗ್ಯ ಅಧಿಕಾರಿಗಳು ಈತನ ಬಗ್ಗೆ ತೀವ್ರ ತಲೆ ಕೆಡಿಸಿಕೊಂಡಿದ್ದಾರೆ.
400 ಜನರನ್ನು ಭೇಟಿಯಾಗಿದ್ದನಂತೆ!:
ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಾದ ರೋಗಿಯ, ಆರಂಭಿಕ ಅಂದಾಜಿನ ಪ್ರಕಾರ ಇಬ್ಬರು ಶಾಸಕರು ಸೇರಿದಂತೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 1,400 ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಉದ್ಯಮಿಗಳನ್ನೂ ಭೇಟಿಯಾಗಿದ್ದ. ಆದರೆ, ನಿರೀಕ್ಷಿತ ಸಂಪರ್ಕ ಪಟ್ಟಿ ಹೆಚ್ಚು ಉದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿ ತನ್ನ ಸಂಪರ್ಕಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ಕಾಸರಗೋಡಿನ ಜಿಲ್ಲಾಧಿಕಾರಿ ಹೇಳಿದ್ದಾರೆ.
ಶಾಸಕರಿಗೆ ಏನು ಸಂಪರ್ಕ?:
ಪ್ರಸ್ತುತ ಈ ಖದೀಮನ ದೆಸೆಯಿಂದ ಸೆಲ್ಪ್ ಕ್ವರೆಂಟೈನ್ ಗೊಳಗಾಗಿರುವ ಕಾಸರಗೋಡು ಮತ್ತು ಮಂಜೇಶ್ವರ ಶಾಸಕರು ಜೀವ ಭಯದಲ್ಲಿ ಕಾಲಕಳೆಯುವಂತಾಗಿದೆ. ಈ ಶಾಸಕರಿಬ್ಬರೂ ಪಾಲ್ಗೊಂಡ ವಿವಾಹ ಸಮಾರಂಭದಲ್ಲಿ ಕಿಲಾಡಿಯೂ ಪಾಲ್ಗೊಂಡಿದ್ದು, ಶಾಸಕರಿಬ್ಬರಲ್ಲೂ ಅನ್ಯೋನ್ಯತೆಯಿಂದ ಬೆರೆತಿದ್ದನು. ಆದರೆ ಶಾಸಕರಿಗೆ ಇಂತಹ ಖತರ್ ನಾಕ್ ವ್ಯಕ್ತಿಯೊಂದಿಗೆ ಅಷ್ಟೊಂದು ನಿಕಟತೆ ಬಹಿರಂಗಗೊಂಡಿರುವುದರೊಂದಿಗೆ ಹಲವು ಊಹೆಗಳಿಗೂ ಕಾರಣವಾಗಿದೆ.



