HEALTH TIPS

ಕಯ್ಯಾರಿನಲ್ಲಿ ಅಂಬಿಕಾನ ಶ್ರೀ ದಾಮೋದರ ಆಚಾರ್ಯ ಸ್ಮರಣಾರ್ಥ ಸಾಮೂಹಿಕ ಬ್ರಹ್ಮೋಪದೇಶ ಹಾಗೂ ವಿಶ್ವಕರ್ಮ ಯಜ್ಞ


        ಉಪ್ಪಳ: ಪೈವಳಿಕೆ ಸಮೀಪದ ಕೀರ್ತಿಶೇಷ ಅಂಬಿಕಾನ ಶ್ರೀ ದಾಮೋದರ ಆಚಾರ್ಯ ಸ್ಮರಣಾರ್ಥ  ಸಾಮೂಹಿಕ ಬ್ರಹ್ಮೋಪದೇಶ ಹಾಗೂ ವಿಶ್ವಕರ್ಮ ಯಜ್ಞ ಕಯ್ಯಾರಿನ ವಿಶ್ವ ಬ್ರಾಹ್ಮಣ ಸಮಾಜ ಭವನದಲ್ಲಿ ಜರಗಿತು.
         ಈ ಪುಣ್ಯ ಕಾರ್ಯಕ್ರಮಕ್ಕೆ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠ ಕಟಪಾಡಿಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಮಹಾಸ್ವಾಮಿಗಳು  ಹಾಗೂ ಅರೆಮಾದನಹಳ್ಳಿ ಶಿವ ಸುಜ್ಞಾನ ಪೀಠದ ಶ್ರೀ ಶ್ರೀ ಶ್ರೀ ಶಿವ ಸುಜ್ಜಾನ ತೀರ್ಥ ಮಹಾಸ್ವಾಮಿಗಳು ಆಗಮಿಸಿ  ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೋಕ್ತೇಸರ ಕೆ.ಕೇಶವ ಆಚಾರ್ಯ ಉಪಸ್ಥಿತರಿದ್ದರು. ಪೈವಳಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅಚ್ಚುತ್ತ ಚೇವಾರು ದಿ.ಅಂಬಿಕಾನ ದಾಮೋದರ ಆಚಾರ್ಯರ ಸಂಸ್ಮರಣೆ ಮಾಡಿದರು. ಪತ್ರಕರ್ತ ಜಯ ಮಣಿಯಂಪಾರೆ ಸಭಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉದಯೋನ್ಮುಖ ಗಾಯಕರಾದ ವಿಘ್ನೇಶ ಆಚಾರ್ಯ,ಪ್ರಕಾಶ್ ಆಚಾರ್ಯ ಚಿಪ್ಪಾರು ಅವರಿಂದ. ಭಕ್ತಿ-ಭಾವ ಗಾಯನ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries