ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120 ಕ್ಕೇರಿತು. ರಾಜ್ಯದಲ್ಲಿ 24 ಮಂದಿಗೆ ಕರೊನಾ ವೈರಸ್ ಸೋಂಕು ಬಾಧಿಸಿದ್ದು, ಈ ವರೆಗೆ ಒಟ್ಟು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಬಾಧಿಸಿದವರ ಸಂಖ್ಯೆ 265 ಕ್ಕೇರಿದೆ. ಇವರಲ್ಲಿ 26 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾದವರಲ್ಲಿ ನಾಲ್ವರು ವಿದೇಶಿಯರು. ಇಬ್ಬರು ಸಾವಿಗೀಡಾಗಿದ್ದಾರೆ. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಾಗಿ ಕರೊನಾ ವೈರಸ್ ಬಾಧಿತ 237 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ 12, ಎರ್ನಾಕುಳಂ-3, ತೃಶ್ಶೂರು-2, ಮಲಪ್ಪುರಂ-2, ಕಣ್ಣೂರು-2 ಮತ್ತು ಪಾಲ್ಘಾಟ್ ಜಿಲ್ಲೆಯಲ್ಲಿ-1 ಎಂಬಂತೆ ರೋಗ ಬಾಧಿಸಿದ್ದು, ದೃಢಗೊಂಡಿದೆ.
ರಾಜ್ಯದಲ್ಲಿ ಒಟ್ಟು 164130 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 622 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದು, 163508 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ 123 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತಿರುವನಂತಪುರ ಮತ್ತು ಕಲ್ಲಿಕೋಟೆಯ ತಲಾ ಒಬ್ಬರು ಕರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬುಧವಾರ ದೃಢೀಕರಿಸಿದ ರೋಗ ಬಾಧಿತರಲ್ಲಿ 9 ಮಂದಿ ವಿದೇಶದಿಂದ ಬಂದವರು. ಉಳಿದವರು ರೋಗ ಬಾಧಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ.
ರಾಜ್ಯದಲ್ಲಿ ಒಟ್ಟು 191 ಮಂದಿ ವಿದೇಶದಿಂದ ಬಂದವರಿಗೆ ರೋಗ ದೃಢೀಕರಿಸಲಾಗಿದ್ದು, 7 ಮಂದಿ ವಿದೇಶಿಯರಿಗೆ ರೋಗ ದೃಢಗೊಂಡಿದೆ. 67 ಮಂದಿ ಕರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ.
ಕಾಸರಗೋಡು ಮೆಡಿಕಲ್ ಕಾಲೇಜನ್ನು ನಾಲ್ಕು ದಿನಗಳೊಳಗೆ ಕರೊನಾ ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ 8971 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 177 ಮಂದಿ ಆಸ್ಪತ್ರೆಗಳಲ್ಲಿ, 8794 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಈ ವರೆಗೆ 1109 ಮಂದಿಯ ಸ್ಯಾಂಪಲ್ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಇದರಲ್ಲಿ 371 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೆÇಲೀಸರ ಡಬ್ಬಲ್ ಲಾಕ್ ಭದ್ರತೆ :
ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಪೆÇಲೀಸರು ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಿದ್ದಾರೆ. ಇದರ ಅಂಗವಾಗಿ 6 ಗ್ರಾಮ ಪಂಚಾಯತ್ಗಳು ಮತ್ತು ಕಾಸರಗೋಡು ನಗರಸಭೆ ಪೆÇಲೀಸ್ ಬಿಗಿ ಸುಪರ್ದಿಯಲ್ಲಿದೆ. ಕೋವಿಡ್ 19 ಸೋಂಕು ಅತ್ಯ„ಕ ಪ್ರಮಾಣದಲ್ಲಿ ಖಚಿತಗೊಂಡಿರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಆದೇಶ ಪ್ರಕಾರ ಈ ಡಬ್ಬಲ್ ಲಾಕ್ ಭದ್ರತೆ ಏರ್ಪಡಿಸಲಾಗಿದೆ. ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಪಳ್ಳಿಕ್ಕರೆ, ಉದುಮ ಗ್ರಾಮ ಪಂಚಾಯತ್ ಪೆÇಲೀಸರ ವಿಶೇಷ ನಿಗಾದಲ್ಲಿವೆ.
ಲಾಕ್ ಡೌನ್ ಆದೇಶ ಉಲ್ಲಂಘನೆ : 28 ಕೇಸುಗಳ ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 28 ಕೇಸುಗಳನ್ನು ದಾಖಲಿಸಲಾಗಿದೆ. 57 ಮಂದಿಯನ್ನು ಬಂಧಿಸಲಾಗಿದೆ. 23 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3 ಕೇಸುಗಳು, ಕಾಸರಗೊಡಿನಲ್ಲಿ 1, ಬದಿಯಡ್ಕದಲ್ಲಿ 1, ಆದೂರಿನಲ್ಲಿ 1, ವಿದ್ಯಾನಗರದಲ್ಲಿ 3, ಹೊಸದುರ್ಗ 3, ಚಿತ್ತಾರಿಕಲ್ 3, ಚಂದೇರ 3, ನೀಲೇಶ್ವರ 2, ವೆಳ್ಳರಿಕುಂಡ್ 2, ಮೇಲ್ಪರಂಬ 1, ರಾಜಪುರಂ 1, ಬೇಡಗಂ 1, ಅಂಬಲತ್ತರ 1 ಪೆÇಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 244 ಕೇಸು ದಾಖಲಾಗಿವೆ. 345 ಮಂದಿಯನ್ನು ಬಂ„ಸಲಾಗಿದೆ. 158 ವಾಹನಗಳನ್ನು ವಶಪಡಿಸಲಾಗಿದೆ.