ಕಾಸರಗೋಡು: ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೋವಿಡ್ 19 ರ ಸಾಮಾಜಿಕ ಹರಡುವಿಕೆ ನಡೆಯದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
covid19kasaragod ಎಂಬ ಫೇಸ್ ಬುಕ್ ಪೇಜ್ ನ ಲೈವ್ ನಲ್ಲಿ ಶುಕ್ರವಾರ ಅವರು ಮಾತನಾಡಿದರು.
ದಿನ ಬಿಟ್ಟು ದಿನ ಮಧ್ಯಾಹ್ನ 2.30ರಿಂದ 3.30ಕ್ಕೆ ಜಿಲ್ಲಾಧಿಕಾರಿ ಈ ಫೇಸ್ ಬುಕ್ ಪೇಜ್ ನಲಲಿ ಲೈವ್ ನಲ್ಲಿ ಸಿಗುವರು. ಈ ಸೋಂಕಿನ ಸಾಮಾಜಿಕ ಹರಡುವಿಕೆ ತಡೆಗಟ್ಟಲು ರಾಜ್ಯ ಸರಕಾರ ಸಮರ್ಥ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದವರು ನುಡಿದರು. ಪ್ರತಿಯೊಬ್ಬರೂ ತಮ್ಮಮನೆಗಳಲ್ಲೇ ಉಳಿದುಕೊಂಡು ಕೋವಿಡ್ 19 ಪ್ರತಿರೋಧ ಚಟುವಟಿಕೆಯನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಈಗ ವುಹಾನ್ ನಿಂದ ಬಂದ ಒಬ್ಬ ವ್ಯಕ್ತಿ ಮಾತ್ರ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅನಿವಾರ್ಯ ಸಾಮಾಗ್ರಿಗಳಿಗೆ ಅತಿಬೆಲೆ ಈಡು ಮಾಡಿದರೆ ಕಠಿನ ಕ್ರಮಕೈಗೊಳ್ಳಲಾಗುವುದು. ಇಂಥಾ ಅಂಗಡಿಗಳ ಮಾಲೀಕರ ಪರವಾನಗಿ ರದ್ದು ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.https://www.facebook.com/113385236963763/videos/535785190641574/


