HEALTH TIPS

ವಿಶೇಷ ಅಧಿಕಾರಿಯಿಂದ ಅನ್ಯ ರಾಜ್ಯಗಳ ಕಾರ್ಮಿಕರ ಭೇಟಿ

   
      ಕಾಸರಗೋಡು:  ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸಲು ಆಗಮಿಸಿರುವ ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ ನೀಲೇಶ್ವರದ ಇತರ ರಾಜ್ಯಗಳ ಕಾರ್ಮಿಕರ ವಸತಿ ಕೇಂದ್ರಕ್ಕೆ ಭೇಟಿ ನೀಡಿದರು. ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಕರ ಜೊತೆಗೆ ಅವರು ಸಂವಾದ ನಡೆಸಿದರು. ಪಳ್ಳಿಕ್ಕರೆ ರೈಲ್ವೇ ಮೇಲ್ಸೇತುವೆ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರನ್ನು ಮತ್ತು ಪಾಲಾಯಿ ರೆಗ್ಯುಲೇಟರ್ ಕಂ ಬ್ರಜ್ಡ್ ನಿರ್ಮಾಣ ಕಾರ್ಮಿಕರನ್ನು ಅವರು ಸಂದರ್ಶಿಸಿದರು. ಈಗಿರುವ ಪರಿಸ್ಥಿತಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿರುವ ಬಗ್ಗೆ ನೀಲೇಶ್ವರ ನಗರಸಭೆಯ ಅಧ್ಯಕ್ಷ ಪೆÇ್ರ. ಕೆ.ಪಿ.ಜಯರಾಜನ್ ಮಾಹಿತಿ ನೀಡಿದರು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ತಹಸೀಲ್ದಾರ್ ಎಂ.ಮಣಿರಾಜ್, ಲೈನಸ್ ಅಧಿಕಾರಿ ಪಿ.ವಿ.ತುಳಸೀ ರಾಜ್ ಜತೆಗಿದ್ದರು. ನಗರಸಭೆ ಮತ್ತು ಕಂದಾಯ ಇಲಾಖೆ ಕಾರ್ಮಿಕರಿಗೆ ಸೌಲಭ್ಯ ಒದಗಿಸುತ್ತಿವೆ. ಅಜಾನೂರು ಗ್ರಾಮಪಂಚಾಯತ್ ನ ಅತಿಂuಟಿಜeಜಿiಟಿeಜ ಲ್ ನ ಇತರ ರಾಜ್ಯಗಳ 165 ಮಂದಿ ವಾಸಿಸುವ ಶಿಬಿರಕ್ಕೂ ತಂಡ ಭೇಟಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries