ಬದಿಯಡ್ಕ: ದೇಶಾದ್ಯಂತ ಹರಡಿರುವ ಕೋವಿಡ್ 19 ಇದರ ಭಾಗವಾಗಿ ಬದಿಯಡ್ಕ ಪೆÇಲೀಸ್ ಸ್ಟೇಷನಿಗೆ ಅವಶ್ಯ ವಸ್ತುವನ್ನು ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಅನೀಶ್ ಅವರಿಗೆ ಹಸ್ತಾಂತರಿಸಲಾಯಿತು.
ಮಾಸ್ಕ್, ಫಲವಸ್ತುಗಳು, ಮಿನರಲ್ ವಾಟರ್, ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧ್ಯಕ್ಷ ಸಂತೋಷ್ ಮಾಸ್ತರ್, ಕುಂಬಳೆ ಉಪಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್, ಕುಂಬಳೆ ಉಪಜಿಲ್ಲಾ ಕೋಶಾಧಿಕಾರಿ ನಿರಂಜನ ರೈ ಪೆರಡಾಲ, ಕೆ.ಪಿ.ಎಸ್.ಟಿ.ಎ ಅಕಾಡೆಮಿಕ್ ಜಿಲ್ಲಾ ಕನ್ವೀನರ್ ಪ್ರದೀಪ್ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.


