HEALTH TIPS

ವಿದೇಶದಿಂದ ಆಗಮಿಸುವವರಿಗೆ ರಾಯಭಾರ ಕಚೇರಿ ಕೋವಿಡ್ ಪರೀಕ್ಷೆ ಕೈಗೊಳ್ಳಬೇಕು-ಪಿಣರಾಯಿ ಪತ್ರ


           ತಿರುವನಂತಪುರಂ: ವಿದೇಶದಿಂದ ಆಗಮಿಸುವವರಿಗೆ ಆಗಮಿಸುವ ಮೊದಲೇ ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಕೋವಿಡ್ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಸ್ಕøತ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
          ವಿದೇಶ ರಾಷ್ಟ್ರಗಳಲ್ಲಿ ಪರೀಕ್ಷಾ ಕಿಟ್‍ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿರುವ ಮುಖ್ಯಮಂತ್ರಿಗಳು ಸ್ವತಃ ಖರ್ಚಿನಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದ ವಲಸಿಗರನ್ನು ಉಚಿತವಾಗಿ ಪರೀಕ್ಷಿಸುವ ನಿಟ್ಟಿನಲ್ಲಿ ರಾಯಭಾರ ಕಚೇರಿಗಳು ಕ್ರಮ ಕೈಗೊಳ್ಳಬೇಕೆಂದು ಪಿಣರಾಯಿ ವಿಜಯನ್ ಪತ್ರದಲ್ಲಿ ವಿನಂತಿಸಿದ್ದಾರೆ.
       ವಿದೇಶದಿಂದ ಬರುವ ಜನರ ಸಂಕ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು  ಕೋವಿಡ್ ಪ್ರಕರಣಗಳು ವರ್ಧಿಸುವ ಸಾಧ್ಯತೆಯಿದೆ. ಕೋವಿಡ್-ಪಾಸಿಟಿವ್ ಇರುವ ಮತ್ತು ಇತರ ಅನಾರೋಗ್ಯ ಸಮಸ್ಯೆ ಇರುವವರು ಒಂದೇ ವಿಮಾನದಲ್ಲಿ ಜೊತೆಯಾಗಿ ಪ್ರಯಾಣಿಸುವುದರಿಂದ ಸಾಂಕ್ರಾಮಿಕತೆ ತಲೆದೋರುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-ಪಾಸಿಟಿವ್ ಎಂದು ಕಂಡುಬರುವವರಿಗೆ ಪ್ರತ್ಯೇಕ ವಿಶೇಷ ವಿಮಾನವನ್ನು ಪರಿಗಣಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಕೇಳಿರುವರು.
         ಏತನ್ಮಧ್ಯೆ, ರಾಜ್ಯದಲ್ಲಿ ನಿನ್ನೆ 54 ಜನರಲ್ಲಿ ನಿನ್ನೆ ಕೋವಿಡ್ -19 ದೃಢಪಟ್ಟಿದೆ. ಪರೀಕ್ಷಿಸಿದ 56 ಮಾದರಿಗಳ ಫಲಿತಾಂಶಗಳು ಋಣಾತ್ಮಕವಾಗಿವೆ. ಕೋಝಿಕ್ಕೋಡ್‍ನಲ್ಲಿ  8, ಎರ್ನಾಕುಲಂ ಮತ್ತು ತ್ರಿಶೂರ್‍ನಲ್ಲಿ ಏಳು, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ 6, ತಿರುವನಂತಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ 4, ಕೊಟ್ಟಾಯಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ 3, ಪತ್ತನಂತಿಟ್ಟು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ 2, ವಯನಾಡ್ ಕೊಲ್ಲಂ ಜಿಲ್ಲೆಗಳಲ್ಲಿ ತಲಾ ಒಬ್ಬ ವ್ಯಕ್ತಿಗೆ ರೋಗ ಪತ್ತೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries