ಕುಂಬಳೆ: ಕೊಯಿಪ್ಪಾಡಿ ಕಡಪ್ಪರದಲ್ಲಿ ತೀವ್ರ ಕಡಲ್ಕೊರೆತ ಪ್ರದೇಶವನ್ನು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಅಹವಾಲು ಅಲಿಸಿ ಕೂಡಲೇ ಅಧಿಕಾರಿ ಹಾಗೂ ಮೀನುಗಾರಿಕಾ-ಬಂದರು ಖಾತೆ ಸಚಿವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ತುರ್ತು ಅಗತ್ಯ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯು.ಡಿ.ಎಫ್. ನಾಯಕರಾದ ಕುಂಬಳೆ ಲಕ್ಷ್ಮಣ ಪ್ರಭು, ಝಕಿರ್ ಅಹಮದ್, ಯುವ ಕಾಂಗ್ರೆಸ್ ನಾಯಕರಾದ ಮುನಾಫ್ ನುಳ್ಳಿಪಡಿ, ನಾಸರ್ ಮೊಗ್ರಾಲ್, ರಿಯಾಜ್ ಮೊಗ್ರಾಲ್, ದಾಸನ್, ಗ್ರಾಮ ಪಂಚಾಯತಿ ಸದಸ್ಯ ಮೊಹಮ್ಮದ್ ಜೊತೆಗಿದ್ದರು.


