HEALTH TIPS

ಅತ್ಯಧಿಕ ಬಂಜರು ಭೂಮಿ ಪರಪ್ಪ ಬ್ಲಾಕ್ ಪಂಚಾಯತ್ ನಲ್ಲಿ: ಗ್ರಾಮಪಂಚಾಯತ್ ಗಳಲ್ಲಿ ಮುಂಚೂಣಿಯಲ್ಲಿ ಬೇಡಡ್ಕ ಪಂಚಾಯತ್

 
      ಕಾಸರಗೋಡು: ರಾಜ್ಯ ಸರ್ಕಾರದ ಕೃಷಿಯಲ್ಲಿ ಸ್ವಾವಲಂಬಿತನ ಒದಗಿಸುವ ಯೋಜನೆ "ಸುಭಿಕ್ಷ ಕೇರಳಂ" ಗಾಗಿ ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಬಂಜರು ಜಾಗ ಹಸ್ತಾಂತರಗೊಂಡಿರುವುದು ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ.
       724.72 ಎಕ್ರೆ ಜಾಗ ಇಲ್ಲಿಂದ ಲಭಿಸಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ನಿಂದ 615.72 ಎಕ್ರೆ, ಕಾಸರಗೋಡು ಬ್ಲಾಕ್ ಪಂಚಾಯತ್ ನಿಂದ 466.11 ಎಕ್ರೆ, ಕಾಞಂಗಾಡ್ ಬ್ಲಾಕ್ ಪಂಚಾಯತ್ ನಿಂದ 429.84 ಎಕ್ರೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ನಿಂದ 286.67 ಎಕ್ರೆ, ನೀಲೇಶ್ವರ ಬ್ಲಾಕ್ ಪಂಚಾಯತ್ ನಿಂದ 277.06 ಎಕ್ರೆ ಜಾಗ ಲಭ್ಯವಾಗಿದೆ.
        ಸುಭಿಕ್ಷ ಕೇರಳಂ ಯೋಜನೆಗಾಗಿ ಗ್ರಾಮಪಂಚಾಯತ್ ಮಟ್ಟದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಂಜರು ಜಾಗ ಹಸ್ತಾಂತರಗೊಂಡಿರುವುದು ಬೇಡಡ್ಕ ಪಂಚಾಯತ್ ನಿಂದ. ಇಲ್ಲಿಂದ 316.51 ಎಕ್ರೆ ಜಾಗ ಲಭ್ಯವಾಗಿದೆ. ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನಿಂದ 221.81 ಎಕ್ರೆ ಬಂಜರು ಜಾಗ ಲಭಿಸಿದೆ. ಕುತ್ತಿಕೋಲ್ ಗ್ರಾಮಪಂಚಾಯತ್ ನಿಂದ 155.80 ಎಕ್ರೆ, ಪನತ್ತಡಿ ಪಂಚಾಯತ್ ನಿಂದ 141.22 ಎಕ್ರೆ, ಕಳ್ಳಾರ್ ಪಂಚಾಯತ್ ನಿಂದ 132.11 ಎಕ್ರೆ, ಮಧೂರು ಗ್ರಾಮಪಂಚಾಯತ್ ನಿಂದ 137.56 ಎಕ್ರೆ, ಚೆಂಗಳ ಗ್ರಾಮಪಂಚಾಯತ್ ನಿಂದ 104.58 ಎಕ್ರೆ  ಬಂಜರು ಜಾಗ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries