ತಿರುವನಂತಪುರ: ಭಕ್ತರಿಗೆ ಪ್ರವೇಶವಿಲ್ಲದಿದ್ದರೂ ರಾಜ್ಯದ ದೇವಸ್ಥಾನಗಳಲ್ಲಿ ರಾಮಾಯಣ ಮಾಸಾಚರಣೆ ಪ್ರತೀ ವರ್ಷದಂತೆ ಈ ವರ್ಷವೂ ಅದೇ ರೀತಿ ನಡೆಸಲು ತೀರ್ಮಾನಿಸಲಾಗಿದೆ.
ಜುಲೈ 16 ರಿಂದ ಪಾರಾಯಣ ಮಾಸಾಚರಣೆ ಆರಂಭಗೊಳ್ಳಲಿದೆ. ತಿರುವನಂತಪುರ ದೇವಸ್ವಂ ಮಂಡಳಿ ಅಧ್ಯಕ್ಷ ಎನ್.ವಾಸು ಮತ್ತು ಸಂಬಂಧಪಟ್ಟ ಇತರರು ಸೇರಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ದೇವಸ್ಥಾನಗಳಲ್ಲೂ ರಾಮಾಯಣ ಮಾಸಾಚರಣೆ ನಡೆಯಲಿದೆ. ಆದರೆ ಇತರ ಯಾವುದೇ ಕಾರ್ಯಕ್ರಮಗಳು ನಡೆಯದು.


