ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರ ಕೊಡಮಾಡಿದ ಉಚಿತ ಆಹಾರ ಕಿಟ್ ನ್ನು ಪ್ರೀ ಪ್ರೈಮರಿ ವಿದ್ಯಾರ್ಥಿಗಳ ಹೆತ್ತವರಿಗೆ ವಿತರಿಸುವ ಕಾರ್ಯಕ್ರಮ ಮೀಯಪದವು ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ. ಅವರು ಕಿಟ್ ಗಳನ್ನು ಹೆತ್ತವರಿಗೆ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಿದರು. ಸರ್ಕಾರದ ಮೂಲಕ ಲಭ್ಯವಾಗಿರುವ ಉಚಿತ ಕಿಟ್ ನ ಬಗ್ಗೆ ಶಿಕ್ಷಕ ಅರವಿಂದಾಕ್ಷ ಭಂಡಾರಿ ಅವರು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಸುಧಾಕರ.ವಿ. ಉಪಸ್ಥಿತರಿದ್ದರು. ಅಧ್ಯಾಪಕರು ಹೆತ್ತರು ಭಾಗವಹಿಸಿದ್ದರು.


