ಮಂಜೇಶ್ವರ : ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾದೊಂದಿಗೆ ಒಬ್ಬನನ್ನು ಮಂಜೇಶ್ವರ ಪೆÇಲೀಸರು ನಿನ್ನೆ ಸಂಜೆ ಸೆರೆ ಹಿಡಿದಿದ್ದಾರೆ. ಶಂಕಾಸ್ಪದವಾದ ರೀತಿಯಲ್ಲಿ ಸಂಚರಿಸುತ್ತಿದ್ದ ಕಾರನ್ನು ಪೆÇಲೀಸರು ಬೆನ್ನಟ್ಟುತ್ತಿರುವ ಮಧ್ಯೆ ಕಾರು ಪಲ್ಟಿಯಾಗಿ ಅಪಘಾತಕ್ಕೀಡಾಯಿತು.
ಮಂಜೇಶ್ವರ ಸಮೀಪದ ಬಟ್ಯಪದವು ಎಂಬಲ್ಲಿ ವಾಹನ ತಪಾಸಣೆ ವೇಳೆ ಈ ಕಾರ್ಯಾಚರಣೆ ನಡೆದಿದೆ. ಕೆ ಎಲ್ 14 ಡಬ್ಲ್ಯು 282 ಕಾರು ಚಲಾಯಿಸುತ್ತಿದ್ದ ಸ್ಥಳೀಯ ನಿವಾಸಿ ಹುಸೈನ್ (25) ರವರನ್ನು ಪೆÇಲೀಸರು ವಶಕ್ಕೆ ತೆಗೆದಿದ್ದಾರೆ. ಈತನಿಂದ ಹತ್ತು ಕಿಲೋ ಗಾಂಜಾ ವಶಪಡಿಸಲಾಗಿದೆ.


