ಮುಳ್ಳೇರಿಯ: ಹಿರಿಯ ವಿದ್ವಾಂಸ ಡಾ.ಬಿ.ಪ್ರಭಾಕರ ಶಿಶಿಲ ಅವರ ಮಹತ್ವಾಕಾಂಕ್ಷೆಯ ಜನಪರ ಕಾದಂಬರಿ ಪುಂಸ್ತ್ರೀ ಅಂಬೆ ಎಂಬ ಶಿರೋನಾಮೆಯಲ್ಲಿ ಮಲೆಯಾಳಂ ಭಾಷೆಗೆ ತರ್ಜುಮೆಗೊಂಡು ಕೇರಳದ ಕಲ್ಲಿಕೋಟೆಯಲ್ಲಿ ಜು.5 ರಂದು ಬಿಡುಗಡೆಯಾಗಿದೆ.
ಹಿರಿಯ ಸಾಹಿತಿ ಕೆ.ವಿ.ಕುಮಾರನ್ ಅವರಿಂದ ಮಲೆಯಾಳಕ್ಕೆ ತರ್ಜುಮೆಗೊಂಡಿರುವ ಪುಂಸ್ತ್ರೀಯನ್ನು ಅಂಬೆಯಾಗಿಸಿ ಕೇರಳದ ಅತ್ಯಂತ ಪ್ರತಿಷ್ಠಿತ ಮಾತೃಭೂಮಿ ಪ್ರಕಾಶನವು ಹೊರತಂದಿದ್ದು, ಅದು ಈಗ ಕೇರಳದಾದ್ಯಂತ ಮಾರಾಟಕ್ಕೆ ಲಭ್ಯವಿದೆ. ಕೊರೊನಾ ಹಾವಳಿಯಿಂದಾಗಿ ಮಾತೃಭೂಮಿ ಕಲ್ಲಿಕೋಟೆ ಪ್ರಧಾನ ಕಾರ್ಯಾಲಯದಲ್ಲಿ ಕೃತಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು. ಕೃತಿಯು ಕಾಸರಗೋಡಿನ ಪುಸ್ತಕದ ಮಳಿಗೆಗಳಲ್ಲಿ ಲಭ್ಯವಿದೆ.


