HEALTH TIPS

ಕುಮ್ಮನನ್ ರನ್ನು ಪಾರುಮಾಡಲು ಹಣ ಹಿಂತಿರುಗಿಸುವ ವ್ಯವಸ್ಥೆಗಳು ಆರಂಭ-ವಂಚನೆ ಪ್ರಕರಣದಲ್ಲಿ ಬಿಜೆಪಿ ರಾಜಿ ವ್ಯವಸ್ಥೆಗೆ

  

       ಅರಣ್ಮುಲಾ: ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಮಿಜೋರಾಂ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರ ವಿರುದ್ಧದ ಆರ್ಥಿಕ ವಂಚನೆ ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನ ನಡೆಯುತ್ತಿದೆ. ಅರಣ್ಮುಲಾ ಪೆÇಲೀಸರು ಕುಮ್ಮನಂ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಹಣವನ್ನು ದೂರುದಾರರಿಗೆ ಹಿಂದಿರುಗಿಸುವ ಮೂಲಕ ಈ ವಿಷಯವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 

        ಕುಮ್ಮನಂ ರಾಜಶೇಖರನ್ ಮತ್ತು ಇತರರ ವಿರುದ್ಧ ಸಿ.ಆರ್.ಹರಿಕೃಷ್ಣನ್ ಅವರು ಪೆÇಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕುಮ್ಮನಂ ನಾಲ್ಕನೇ ಆರೋಪಿಯಾಗಿದ್ದಾರೆ. 28.75 ಲಕ್ಷ ರೂ. ಹಣವನ್ನು ಹಿಂದಿರುಗಿಸುವ ಮೂಲಕ ಪ್ರಕರಣದಿಂದ ಬಚವಾಗಲು ಬಿಜೆಪಿ ಪ್ರಯತ್ನಿಸುತ್ತಿದೆ.

       ಪೇಪರ್  ಕಾಟನ್ ಮಿಕ್ಸ್ ಎಂಬ ಕಂಪನಿಯಲ್ಲಿ ಪಾಲುದಾರನಾಗಬಹುದು ಎಂದು ಹೇಳುವ ಮೂಲಕ ಹಣ ವಂಚಿಸಲಾಗಿದೆ ಎಂದು ಹರಿರಿಕೃಷ್ಣನ್ ಎಂಬವರು ದೂರು ನೀಡಿದ್ದರು. ಆರಂಭದಿಂದಲೂ ಪ್ಲಾಸ್ಟಿಕ್ ಮುಕ್ತ ಹತ್ತಿ ಮಿಶ್ರಣ ಬ್ಯಾನರ್‍ಗಳನ್ನು ತಯಾರಿಸಲು ಕಂಪನಿಯೊಂದಿಗೆ ಸಹಭಾಗಿತ್ವವನ್ನು ರೂಪಿಸುವುದಾಗಿ ಕಂಪನಿ ಭರವಸೆ ನೀಡಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಮ್ಮನಂ ರಾಜಶೇಖರನ್ ಮತ್ತು ಅವರ ಪಿ.ಎ. ಪ್ರವೀಣ್ ಸೇರಿದಂತೆ ಹತ್ತು ಜನರ ವಿರುದ್ಧ ದೂರು ನೀಡಲಾಗಿದೆ.

       ಪಾಲಕ್ಕಾಡ್‍ನ ನ್ಯೂ ಭಾರತ್ ಬಯೋಟೆಕ್ನಾಲಜಿ ಕಂಪನಿ ವಿರುದ್ಧ ಹರಿಕೃಷ್ಣನ್ ಪೆÇಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರವೀಣ್ ಮುಖ್ಯ ಆರೋಪಿ. ಆರನ್ಮುಲಾ ಪೆÇಲೀಸರು ಆರೋಪಿಗಳ ವಿರುದ್ಧದ ಆರೋಪಗಳು ಹಣ ವಂಚನೆ ಮತ್ತು ಹಣ ವರ್ಗಾವಣೆ ವ್ಯಾಜ್ಯದಡಿ ಬರುತ್ತದೆ ಎಂದಿರುವರು.  ವಿಚಾರಣೆ ಪ್ರಾರಂಭವಾದ ಕೂಡಲೇ ಕಂಪನಿಯ ಮಾಲೀಕ ವಿಜಯನ್ ಅವರು ಪಾವತಿಸಬೇಕಾದ ಸಂಪೂರ್ಣ ಮೊತ್ತವನ್ನು ಪಾವತಿಸುವುದಾಗಿ ದೂರುದಾರರಿಗೆ ಮಾಹಿತಿ ನೀಡಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಕುಮ್ಮನಂ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ತಪ್ಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries