HEALTH TIPS

ಶಬರಿಮಲೆ ಪ್ರಸಾದ ಇನ್ನು ಅಂಚೆ ಮೂಲಕವೂ ಲಭ್ಯ-ಅರವಣ ಮನೆಮನೆಗಳಿಗೆ!!

               ಶಬರಿಮಲೆ: ಶಬರಿಮಲೆ ಪ್ರಸಾದವನ್ನು ಮನೆಗೆ ತಲುಪಿಸುವ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಆರಂಭಿಸಿದೆ. ಶ್ರೀಕ್ಷೇತ್ರ ಶಬರಿಮಲೆಯ ಪ್ರಸಿದ್ದವೂ ಪ್ರಮುಖವೂ ಪ್ರಸಾದವಾಗಿರುವ ಅರವಣ ಮತ್ತು ಆಡಿಯ ಶಿಷ್ಟಂ ತುಪ್ಪ ಸೇರಿದಂತೆ ಇತರ ಪ್ರಸಾದಗಳನ್ನು ಮನೆಗೆ ತಲಪಿಸಲಾಗುವುದು. ದೇವಸ್ವಂ ಬೋರ್ಡ್ ಮತ್ತು ಭಾರತೀಯ ಅಂಚೆ ಇಲಾಖೆಯ ಮಧ್ಯೆ ನಡೆದ ಒಪ್ಪಂದದ ಆಧಾರದಲ್ಲಿ ಇಂತಹದೊಂದು ವ್ಯವಸ್ಥೆ ಜಾರಿಗೆ ಬಂದಿದೆ. ಒಂದು ಕಿಟ್ ಪ್ರಸಾದದ ಮೌಲ್ಯವನ್ನು 450 ರೂ.ಗಳೆಂದು ನಿಶ್ಚಯಿಸಲಾಗಿದೆ.

                   ಕಿಟ್‍ನಲ್ಲಿ ಏನಿದೆ?:

             ಕಿಟ್‍ನಲ್ಲಿ ಅರವಣ, ವಿಭೂತಿ, ಆದಿಯಾ ಶಿಷ್ಟಂ, ತುಪ್ಪ, ಕೇಸರಿ, ಅರಿಶಿನ ಪುಡಿ ಮತ್ತು ಅರ್ಚನಾ ಪ್ರಸಾದಗಳು ಕಿಟ್ ನಲ್ಲಿರಲಿದೆ. ಪ್ರಸಾದದ ಕಿಟ್ ಒಂದರ ಮೌಲ್ಯವನ್ನು 450 ರೂ.ಎಮದು ನಿಗದಿಪಡಿಸಲಾಗಿದೆ. ಇದರಲ್ಲಿ 250 ರೂಗಳನ್ನು ದೇವಸ್ವಂ ಮಂಡಳಿಗೆ ನೀಡಲಾಗುವುದು. ಅಂಚೆ ಶುಲ್ಕಕ್ಕಾಗಿ ಅಂಚೆ ಇಲಾಖೆ 200 ರೂ.ಪಡೆಯಲಿದೆ.  ಬುಕ್ಕಿಂಗ್ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಈ ಕಿಟ್ ನಲ್ಲಿ ಅಪ್ಪಂ ಪ್ರಸಾದ ಇರುವುದಿಲ್ಲ ಎಂದು ಅಧಿಕೃತರು ಪ್ರತ್ಯೇಕವಾಗಿ ಹೇಳಿರುವರು. ಅಂಚೆಯಲ್ಲಿ ಅಪ್ಪಂ ಪ್ರಸಾದ ಕಳಿಸುವುದು ಸೂಕ್ತವಲ್ಲವೆಂಬ ನಿರ್ದೇಶಾನುಸಾರ ಇದನ್ನು ಕೈಬಿಡಲಾಗಿದೆ. 

            ಕೋವಿದ್‍ನಿಂದಾಗಿ ರಾಷ್ಟ್ರದ ಉದ್ದಗಲದ ಭಕ್ತರು ಶಬರಿಮಲೆ ತಲುಪಲು ಸಾಧ್ಯವಾಗದ ಕಾರಣ ಅಂಚೆ ಇಲಾಖೆಯ ಸಹಯೋಗದೊಂದಿಗೆ ದೇವಸ್ವಂ ಮಂಡಳಿ ಇಂತಹ ಸೌಲಭ್ಯವನ್ನು ಜಾರಿಗೆ ತಂದಿದೆ. ಭಕ್ತರಿಗೆ ಎಷ್ಟು ಬೇಕಿದ್ದರೂ ಕಿಟ್ ಗಳನ್ನು ಪಡೆಯಬಹುದಾಗಿದೆ. 

             ದೇವಸ್ವಂ ಬೋರ್ಡ್‍ನ ಫಸ್ಟ್ ಆಫೀಸ್ ಗಳಿಂದ ಲಭ್ಯವಾಗುವ ಬುಕ್ಕಿಂಗ್ ಅನುಸರಿಸಿ ಪ್ರಸಾದದ ಕಿಟ್ ನ್ನು ಶ್ರೀಕ್ಷೇತ್ರದಿಂದ ಪಂಪಾದ ಅಂಚೆ ಕಚೇರಿಗೆ ಕಳಿಸಲಾಗುವುದು. ಬಳಿಕ ಅಲ್ಲಿಂದ ವಿಳಾಸದ ಆಧಾರದಲ್ಲಿ ವಿವಿಧ ಅಂಚೆ ಕಚೇರಿಗಳಿಗೆ ಕಳಿಸಲಾಗುವುದು. ಈಗಾಗಲೇ  5,000 ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries