HEALTH TIPS

ರಾಜ್ಯದಲ್ಲಿ ಮುಂದುವರಿದ ಕೋವಿಡ್ ಪ್ರಕೋಪ-ಇಂದು 6282 ಮಂದಿಗೆ ಕೋವಿಡ್ ಪಾಸಿಟಿವ್-ಕಾಸರಗೋಡು 102 ಮಂದಿಗೆ ಸೋಂಕು

                   

           ತಿರುವನಂತಪುರ: ಕೇರಳದಲ್ಲಿ ಇಂದು 6282 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 859, ಕೋಝಿಕ್ಕೋಡ್ 822, ಕೊಲ್ಲಂ 688, ಪತ್ತನಂತಿಟ್ಟು 556, ಆಲಪ್ಪುಳ 526, ತ್ರಿಶೂರ್ 524, ಕೊಟ್ಟಾಯಂ 487, ಮಲಪ್ಪುರಂ 423, ತಿರುವನಂತಪುರ 350, ಕಣ್ಣೂರು 321, ಪಾಲಕ್ಕಾಡ್ 256, ವಯನಾಡ್ 187, ಇಡುಕ್ಕಿ 181, ಕಾಸರಗೋಡು 102 ಎಂಬಂತೆ ಸೋಂಕು ಬಾಧಿಸಲ್ಪಟ್ಟಿದೆ. 

     ಕಳೆದ 24 ಗಂಟೆಗಳಲ್ಲಿ ಯುಕೆಯಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೂ ಸೋಂಕು ದೃಢಪಟ್ಟಿದೆ. ಈವರೆಗೆ ಯುಕೆಯಿಂದ ಆಗಮಿಸಿದ  76 ಜನರಲ್ಲಿ ಸೋಂಕು ಖಚಿತಪಡಿಸಲಾಗಿದೆ. ಈ ಪೈಕಿ 53 ಮಂದಿಗಳ ಪರೀಕ್ಷೆ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿತ ವೈರಸ್ ಇರುವುದು ಪತ್ತೆಯಾಗಿದೆ.

      ಕಳೆದ 24 ಗಂಟೆಗಳಲ್ಲಿ 59,759 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.10.51 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 95,76,795 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.


      ಕಳೆದ 24 ಗಂಟೆಗಳಲ್ಲಿ  18 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 3722 ಕ್ಕೆ ಏರಿಕೆಯಾಗಿದೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 81 ಮಂದಿ ರಾಜ್ಯದ ಹೊರಗಿನಿಂದ ಬಂದವರು.  ಸಂಪರ್ಕದ ಮೂಲಕ 5725 ಜನರಿಗೆ ಸೋಂಕು ತಗುಲಿತು. 425 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 811, ಕೋಝಿಕ್ಕೋಡ್ 802, ಕೊಲ್ಲಂ 684, ಪತ್ತನಂತಿಟ್ಟು 499, ಆಲಪ್ಪುಳ 510, ತ್ರಿಶೂರ್ 510, ಕೊಟ್ಟಾಯಂ 447, ಮಲಪ್ಪುರಂ 400, ತಿರುವನಂತಪುರ 268, ಕಣ್ಣೂರು 241, ಪಾಲಕ್ಕಾಡ್ 117, ವಯನಾಡ್ 180,ಇಡುಕ್ಕಿ 167, ಕಾಸರಗೋಡು 89 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.  

      ರಾಜ್ಯದಲ್ಲಿ ಇಂದು 51 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.  ಕಣ್ಣೂರು 15, ಎರ್ನಾಕುಳಂ 9, ತಿರುವನಂತಪುರ, ಕೋಝಿಕ್ಕೋಡ್ ತಲಾ 6, ತ್ರಿಶೂರ್ 5, ಇಡುಕ್ಕಿ 4, ಪಾಲಕ್ಕಾಡ್, ಕಾಸರಗೋಡು ತಲಾ 2, ಕೊಲ್ಲಂ ಮತ್ತು ಪತ್ತನಂತಿಟ್ಟು ತಲಾ 1 ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿರುವರು. 

      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7032 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 471, ಕೊಲ್ಲಂ 430, ಪತ್ತನಂತಿಟ್ಟು 297, ಆಲಪ್ಪುಳ 394, ಕೊಟ್ಟಾಯಂ 1415, ಇಡುಕ್ಕಿ 154, ಎರ್ನಾಕುಳಂ 826, ತ್ರಿಶೂರ್ 524, ಪಾಲಕ್ಕಾಡ್ 865, ಮಲಪ್ಪುರಂ 422, ಕೋಝಿಕ್ಕೋಡ್  744, ವಯನಾಡ್ 237,ಕಣ್ಣೂರು 220, ಕಾಸರಗೋಡು 33 ಎಂಬಂತೆ ನೆಗೆಟಿವ್ ಆಗಿದೆ.  ಇದರೊಂದಿಗೆ 71,469 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 8,48,476 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,17,434 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,05,926 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,508 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1601 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

   ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ತ್ರಿಶೂರ್ ಜಿಲ್ಲೆಯ ಎಲವಳ್ಳಿ (ಕಾಂಟಿನೆಂಟಲ್ ವಾರ್ಡ್ 2), ಕಳೂರ್ (5), ಇಡುಕ್ಕಿ ಜಿಲ್ಲೆಯ ಆದಿಮಾಲಿ (ಉಪ ವಾರ್ಡ್‍ಗಳು 15 ಮತ್ತು 16) ಮತ್ತು ಪತ್ತನಂತಿಟ್ಟು ಜಿಲ್ಲೆಯ ತಿರುವಲ್ಲಾ ನಗರಸಭೆ (ಉಪ ವಾರ್ಡ್ 11) ಹೊಸ ಹಾಟ್‍ಸ್ಪಾಟ್‍ಗಳಾಗಿವೆ. 8 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 396 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries