ತಿರುವನಂತಪುರ: ಸುದೀರ್ಘ ಅವಧಿಯ ನಂತರ ಕೆ.ಎಸ್.ಆರ್.ಟಿ.ಸಿ ಯಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ನೌಕರರಿಗೆ ಮುಖ್ಯ ಕಚೇರಿಯ ಅನುಮತಿಯನ್ನು ಪಡೆಯಬೇಕೆಂದು ಸಿ.ಎಂ.ಡಿ ನಿರ್ದೇಶಿಸಿದೆ.
ವೇತನ ಸಹಿತ ರಜೆ ತೆಗೆದುಕೊಂಡು ಇತರ ಕೆಲಸಗಳಿಗಾಗಿ ವಿದೇಶಕ್ಕೆ ತೆರಳಿದವರನ್ನು ಮುಖ್ಯ ಕಚೇರಿಯ ಆದೇಶವಿಲ್ಲದೆ ಮತ್ತೆ ಕರ್ತವ್ಯಕ್ಕೆ ಅನುಮತಿಸಲಾಗದು ಎಂದು ಸಿಎಂಡಿ ನಿರ್ದೇಶನ ನೀಡಿದೆ.
ರಜೆ ಅವಧಿಯ ನಂತರ ಕೆಲಸಕ್ಕೆ ಮರಳಲು ವಿಫಲವಾದರೆ ಅದು ಗಂಭೀರ ಅಪರಾಧವಾಗಿದೆ. ಮುಖ್ಯ ಕಚೇರಿಯ ಆದೇಶವಿಲ್ಲದೆ ಘಟಕ ಅಧಿಕಾರಿಗಳು ಮತ್ತೆ ಕರ್ತವ್ಯಕ್ಕೆ ಪ್ರವೇಶಿಸುವುದು ಆದೇಶದ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.