ಆಲಪ್ಪುಳ: ರಾಜ್ಯದಲ್ಲಿ ಮತ್ತೆ ಹಕ್ಕಿ ಜ್ವರ ಕಂಡುಬಂದಿದ್ದು ಜ್ವರದಿಂದ ಬಾತುಕೋಳಿಗಳು ಸೇರಿದಂತೆ ಸುಮಾರು 500 ಪಕ್ಷಿಗಳು ಸಾವನ್ನಪ್ಪಿರುವುದು ಅಲಪ್ಪುಳ ಕೈನಕರಿಯಲ್ಲಿ ದೃಢಪಟ್ಟಿದೆ.
ಇಲ್ಲಿಂದ ಸಂಗ್ರಹಿಸಿದ ಮಾದರಿಗಳನ್ನು ಭೋಪಾಲ್ನ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಲ್ಯಾಬೊರೇಟರಿಯಲ್ಲಿ ಪರೀಕ್ಷಿಸಲಾಯಿತು ಮತ್ತು ವೈರಸ್ ಇರುವುದು ದೃಢಪಡಿಸಲಾಗಿದೆ.
ನಿನ್ನೆ ಮಧ್ಯಾಹ್ನ ಈ ಪ್ರದೇಶದಲ್ಲಿ ಪರಿಶೋಧನೆ ಮತ್ತು ಪಕ್ಷಿಗಳ ಹನನ ಕಾರ್ಯ ನಡೆಸಲಾಯಿತು. ಕೈನಕರಿಯಲ್ಲಿ ಮಾತ್ರ 700 ಬಾತುಕೋಳಿಗಳು, 1600 ಕೋಳಿಗಳನ್ನು ನಾಶಪಡಿಸುವ ಅವಶ್ಯಕತೆಯಿದೆ ಎಂದು ಪ್ರಾಣಿ ಕಲ್ಯಾಣ ಇಲಾಖೆ ಅಂದಾಜಿಸಿದೆ. ಈ ತಿಂಗಳ ಆರಂಭದಲ್ಲಿ ಕೊಟ್ಟಾಯಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಈ ರೋಗ ದೃಢಪಟ್ಟಿತ್ತು.