ತಿರುವನಂತಪುರ: ರಾಜ್ಯ ಅಗ್ನಿಶಾಮಕ ದಳದಲ್ಲೂ ಗುಪ್ತಚರ ಮತ್ತು ವಿಜಿಲೆನ್ಸ್ ತಂಡ ರೂಪಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹೊಸ ಸುಧಾರಣೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಎಡಿಜಿಪಿ ಬಿ. ಸಂಧ್ಯಾ ತಿಳಿಸಿದ್ದಾರೆ.
ಹೊಸ ಸುಧಾರಣಾ ಪ್ರಕ್ರಿಯೆಯು ಮುಖ್ಯಮಂತ್ರಿಯ ನಿರ್ದೇಶನಕ್ಕೆ ಅನುಗುಣವಾಗಿರುತ್ತದೆ. ಅಗ್ನಿಶಾಮಕ ದಳ ಪ್ರಗತಿಯ ಹಂತದಲ್ಲಿದೆ. ಹೊಸ ಸುಧಾರಣೆಯು ಅಗ್ನಿಶಾಮಕ ದಳಕ್ಕೆ ಬಹಳ ಪರಿಣಾಮಕಾರಿ ಎಂದು ನಿರೀಕ್ಷಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣಕ್ಕಾಗಿ ಅಗ್ನಿಶಾಮಕ ದಳದ ಎನ್ ಒ ಸಿ ರಶೀದಿಯ ವಿಸ್ತರಣೆ ಸಂಬಂಧದ ಹೊಸ ವರದಿಯು ಲಂಚದ ಆರೋಪಗಳನ್ನು ಆಧರಿಸಿದೆ. ರಿಷ್ಕಾ ರಾಮ್ ಅವರ ಅರ್ಜಿಗಳು ವಿಳಂಬವಾದ ಹಿನ್ನೆಲೆಯ ತನಿಖೆಯಲ್ಲಿ ಕೆಲವು ಅಧಿಕಾರಿಗಳು ಅರ್ಜಿದಾರರಿಂದ ಲಂಚವನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಅಗ್ನಿಶಾಮಕ ದಳದ ಎನ್ ಒಸಿ ವ್ಯವಸ್ಥೆಯನ್ನು ಸಹ ಪಾರದರ್ಶಕತೆಯಿಂದ ನಿರ್ಧರಿಸಲು ಇಲಾಖೆ ಕಟಿಬದ್ದತೆ ಪ್ರದರ್ಶಿಸಿದೆ.
ಇನ್ನು ಕಟ್ಟಡ ನಿರ್ಮಾಣಕ್ಕೆ ಎನ್ ಒ ಸಿ ಸ್ವೀಕರಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಗ್ನಿಶಾಮಕ ದಳದವರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಹೊಸ ಸುಧಾರಣೆಗಳನ್ನು ಸಮರ್ಥವಾಗಿ ಜಾರಿಗೆ ತರಲು ಅಸ್ತಿತ್ವದಲ್ಲಿರುವ ಹಂಗಾಮಿ ಉದ್ಯೋಗಿಗಳಿಗೆ ವಿಶೇಷ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ರಾಜ್ಯದಲ್ಲಿ ಬೆಂಕಿಯ ಅಪಾಯದಲ್ಲಿರುವ ಕಟ್ಟಡಗಳ ಸಂಪೂರ್ಣ ವಿವರಗಳು ವಾಯುಪಡೆಯ ಗುಪ್ತಚರ ವಿಭಾಗದಿಂದ ಸಂಗ್ರಹಿಸಲಾಗಿದೆ. ಅಗ್ನಿಶಾಮಕ ದಳದ ಮುಖ್ಯಸ್ಥರು ಇಂಟೆಲಿಜೆನ್ಸ್ ಸಂಗ್ರಹಿಸಿದ ಮಾಹಿತಿಗಳನ್ನು ವಾಯುಪಡೆಯ ಅಧಿಕೃತರಿಗೆ ರವಾನಿಸಲಿದೆ ಎಂದು ಹೇಳಲಾಗಿದೆ.





