HEALTH TIPS

ರಾಜ್ಯದಲ್ಲಿ ಇಂದು 3792 ಮಂದಿಗೆ ಕೋವಿಡ್ ದೃಢ-ಕಾಸರಗೋಡು-148 ಮಂದಿಗೆ ಸೋಂಕು

                            

        ತಿರುವನಂತಪುರ: ರಾಜ್ಯದಲ್ಲಿ ಇಂದು 3792 ಮಂದಿ ಜನರಿಗೆ ಕೋವಿಡ್ ಖಚಿತವಾಗಿದೆ. ಕೋಝಿಕೋಡ್ 519, ತ್ರಿಶೂರ್ 416, ಎರ್ನಾಕುಳಂ 415, ಕೊಲ್ಲಂ 411, ಮಲಪ್ಪುರಂ 388, ಆಲಪ್ಪುಳ 308, ಪತ್ತನಂತಿಟ್ಟು 270, ತಿರುವನಂತಪುರ 240, ಕೊಟ್ಟಾಯಂ 236, ಕಣ್ಣೂರು 173, ಕಾಸರಗೋಡು 148, ಪಾಲಕ್ಕಾಡ್ 115, ವಯನಾಡ್ 82, ಇಡುಕ್ಕಿ 71 ಎಂಬಂತೆ ಸೋಂಕು ಬಾಧಿಸಿದೆ.


         ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಿಗೂ ಸೋಂಕು ಕಂಡುಬಂದಿಲ್ಲ. ಇದರೊಂದಿಗೆ, ಇತ್ತೀಚೆಗೆ ಯುಕೆ ಯಿಂದ ಬಂದ 94 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದ್ದು, ಈ ಪೈಕಿ 82 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ರೂಪಾಂತರಿ  ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 73,710 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.5.14 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,14,13,515 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

      ಕಳೆದ 24 ಗಂಟೆಗಳಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 4182 ಕ್ಕೆ ಏರಿಕೆಯಾಗಿದೆ. 

       ಇಂದು, ಸೋಂಕು ಪತ್ತೆಯಾದವರಲ್ಲಿ 112 ಮಂದಿ ಜನರು ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 3418 ಜನರಿಗೆ ಸೋಂಕು ತಗಲಿತು. 236 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 497, ತ್ರಿಶೂರ್ 404, ಎರ್ನಾಕುಳಂ 390, ಕೊಲ್ಲಂ 402, ಮಲಪ್ಪುರಂ 365, ಆಲಪ್ಪುಳ 304, ಪತ್ತನಂತಿಟ್ಟು 240, ತಿರುವನಂತಪುರ 175, ಕೊಟ್ಟಾಯಂ 223, ಕಣ್ಣೂರು 105, ಕಾಸರಗೋಡು 119, ಪಾಲಕ್ಕಾಡ್ 52, ವಯನಾಡ್ 79, ಇಡುಕ್ಕಿ 63 ಎಂಬಂತೆ ಸೋಂಕು ಸಂಪರ್ಕದಿಂದ ಬಾಧಿಸಿದೆ. 

         26 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 7, ತಿರುವನಂತಪುರ, ಕೋಝಿಕೋಡ್ 4, ಕೊಲ್ಲಂ, ಎರ್ನಾಕುಳಂ 2, ಪತ್ತನಂತಿಟ್ಟು, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4650 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 394, ಕೊಲ್ಲಂ 279, ಪತ್ತನಂತಿಟ್ಟು 468, ಆಲಪ್ಪುಳ 578, ಕೊಟ್ಟಾಯಂ 411, ಇಡುಕ್ಕಿ 266, ಎರ್ನಾಕುಳಂ 516, ತ್ರಿಶೂರ್ 385, ಪಾಲಕ್ಕಾಡ್ 160, ಮಲಪ್ಪುರಂ 368, ಕೋಝಿಕೋಡ್ 326, ವಯನಾಡ್ 96, ಕಣ್ಣೂರು 303, ಕಾಸರಗೋಡು 100 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 50,514 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,01,164 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,13,247 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,05,765 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 7482 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 811 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. 4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 369 ಹಾಟ್‍ಸ್ಪಾಟ್‍ಗಳಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries