HEALTH TIPS

ರಾಜ್ಯದಲ್ಲಿ ಇಂದು 1239 ಮಂದಿಗೆ ಕೋವಿಡ್: ಕಾಸರಗೋಡು: 44 ಮಂದಿಗೆ ಸೋಂಕು ಪತ್ತೆ

        ತಿರುವನಂತಪುರ: ಕೇರಳದಲ್ಲಿ ಇಂದು 1239 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ತಿರುವನಂತಪುರ 175, ಕಣ್ಣೂರು 125, ಕೋಝಿಕೋಡ್ 114, ಕೊಲ್ಲಂ 112, ಎರ್ನಾಕುಳಂ 106, ಆಲಪ್ಪುಳ 103, ಇಡಕ್ಕಿ 91, ತ್ರಿಶೂರ್ 89, ಮಲಪ್ಪುರಂ 81, ಕೊಟ್ಟಾಯಂ 70, ಪಾಲಕ್ಕಾಡ್ 59, ಪತ್ತನಂತಿಟ್ಟು 46, ಕಾಸರಗೋಡು 44, ವಯನಾಡ್ 24 ಎಂಬತೆ ಸೋಂಕು ಬಾಧಿಸಿದೆ. 

         ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂಬ ಸೋಂಕು ಬಾಧಿಸಿಲ್ಲ.  ಯುಕೆ (102), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 107 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 101 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಮಂದಿ ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 34,821 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.56 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,26,96,542 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

       ಕಳೆದ 24 ಗಂಟೆಗಳಲ್ಲಿ  12 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್ ನಿಂದ ಮೃತರಾದವರ ಸಂಖ್ಯೆ  4507 ಕ್ಕೆ ಏರಿಕೆಯಾಗಿದೆ. 

         ಇಂದು, ಸೋಂಕು ಬಾಧಿಸಿದವರಲ್ಲಿ 60 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 1,067 ಮಂದಿ  ಜನರಿಗೆ ಸೋಂಕು ತಗಲಿತು. 106 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 115, ಕಣ್ಣೂರು 95, ಕೋಝಿಕೋಡ್ 106, ಕೊಲ್ಲಂ 108, ಎರ್ನಾಕುಳಂ 98, ಆಲಪ್ಪುಳ 100, ಇಡುಕಿ 86, ತ್ರಿಶೂರ್ 87, ಮಲಪ್ಪುರಂ 80, ಕೊಟ್ಟಾಯಂ 66, ಪಾಲಕ್ಕಾಡ್ 20, ಪತ್ತನಂತಿಟ್ಟು 43, ಕಾಸರಗೋಡು 39 ಮತ್ತು ವಯನಾಡ್ 24 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

       ಆರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 3, ತಿರುವನಂತಪುರ, ಎರ್ನಾಕುಳಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.

       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1766 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 92, ಕೊಲ್ಲಂ 170, ಪತ್ತನಂತಿಟ್ಟು 132, ಆಲಪ್ಪುಳ 126, ಕೊಟ್ಟಾಯಂ 115, ಇಡುಕ್ಕಿ 17, ಎರ್ನಾಕುಳಂ 102, ತ್ರಿಶೂರ್ 215, ಪಾಲಕ್ಕಾಡ್ 96, ಮಲಪ್ಪುರಂ 154, ಕೋಝಿಕೋಡ್ 264, ವಯನಾಡ್ 18, ಕಣ್ಣೂರು 214, ಕಾಸರಗೋಡು 51 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 24,081 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,76,571 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.

      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,26,125 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,22,382 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3743 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 427 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್ ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 355 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries