HEALTH TIPS

ರಾಜ್ಯದಲ್ಲಿ ಇಂದು 1985 ಮಂದಿ ಜನರಿಗೆ ಕೊರೊನಾ ಸೋಂಕು: ಕಾಸರಗೋಡಲ್ಲಿ ಮತ್ತೆ ಆತಂತ: ಇಂದು 128 ಮಂದಿಗೆ ಸೋಂಕು ಪತ್ತೆ!

                

            ತಿರುವನಂತಪುರಂ: ರಾಜ್ಯದಲ್ಲಿ ಇಂದು 1985 ಜನರಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 252, ಕೋಝಿಕೋಡ್ 223, ತ್ರಿಶೂರ್ 196, ಕೊಟ್ಟಾಯಂ 190, ಎರ್ನಾಕುಳಂ 178, ಕೊಲ್ಲಂ 175, ತಿರುವನಂತಪುರ 148, ಕಾಸರಗೋಡು 128, ಆಲಪ್ಪುಳ 117, ಪತ್ತನಂತಿಟ್ಟು 101, ಮಲಪ್ಪುರಂ 92, ಪಾಲಕ್ಕಾಡ್ 79, ವಯನಾಡ್ 59, ಇಡುಕ್ಕಿ 47 ಎಂಬಂತೆ ಸೋಂಕು ಬಾಧಿಸಿದೆ. 

         ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‍ನಿಂದ ಆಗಮಿಸಿದ ಯಾರೊಬ್ಬರಿಗೂ ಕೊರೋನಾವನ್ನು ದೃಢೀಕರಿಸಿಲ್ಲ. ಇತ್ತೀಚೆಗೆ, ಯುಕೆ (102), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಈವರೆಗೆ 107 ಜನರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಈ ಪೈಕಿ 101 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

          ಕಳೆದ 24 ಗಂಟೆಗಳಲ್ಲಿ 57,425 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.46 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,27,53,967 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

         ಕಳೆದ 24 ಗಂಟೆಗಳಲ್ಲಿ 10 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,517 ಕ್ಕೆ ಏರಿಕೆಯಾಗಿದೆ. ಇಂದು, ಸೋಂಕು ಮಾಡಿದವರಲ್ಲಿ 100 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 1751 ಮಂದಿ ಜನರಿಗೆ ಸೋಂಕು ತಗಲಿತು. 122 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಣ್ಣೂರು 194, ಕೋಝಿಕೋಡ್ 211, ತ್ರಿಶೂರ್ 191, ಕೊಟ್ಟಾಯಂ 179, ಎರ್ನಾಕುಳಂ 167, ಕೊಲ್ಲಂ 173, ತಿರುವನಂತಪುರ 107, ಕಾಸರಗೋಡು 105, ಆಲಪ್ಪುಳ 110, ಪತ್ತನಂತಿಟ್ಟು 92, ಮಲಪ್ಪುರಂ 89, ಪಾಲಕ್ಕಾಡ್ 39, ವಯನಾಡ್ 52, ಇಡುಕ್ಕಿ 42 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

        ಹನ್ನೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕೋಝಿಕೋಡ್, ಕಣ್ಣೂರು ತಲಾ 5, ತಿರುವನಂತಪುರ ಮತ್ತು ಪಾಲಕ್ಕಾಡ್ ತಲಾ 1 ಎಂಬಂತೆ ಕೊರೊನಾ ದೃಢಪಡಿಸಲಾಗಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2172 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 168, ಕೊಲ್ಲಂ 118, ಪತ್ತನಂತಿಟ್ಟು 206, ಆಲಪ್ಪುಳ 122, ಕೊಟ್ಟಾಯಂ 259, ಇಡಕ್ಕಿ 45, ಎರ್ನಾಕುಳಂ 310, ತ್ರಿಶೂರ್ 211, ಪಾಲಕ್ಕಾಡ್ 79, ಮಲಪ್ಪುರಂ 95, ಕೊಝಿಕೋಡ್ 265, ವಯನಾಡ್ 48, ಕಣ್ಣೂರು 123, ಕಾಸರಗೋಡು 123 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 23,883 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,78,743 ಮಂದಿ ಜನರನ್ನು ಕೊರೋನಾದಿಂದ ಮುಕ್ತಗೊಳಿಸಲಾಗಿದೆ.

       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,26,263 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,22,610 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3,653 ಮಂದಿ ಜನರು ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 441 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಒಂದು ಹೊಸ ಹಾಟ್‍ಸ್ಪಾಟ್ ಗುರುತಿಸಲಾಗಿದೆ. 5 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 351 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries