ನವದೆಹಲಿ: ಎಪ್ರಿಲ್ 1ರಿಂದ 45ಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರಿಗೂ ಕೊರೋನ ಲಸಿಕೆಯನ್ನು ನೀಡಲಾಗುವುದು. ಇದಕ್ಕೆ ಅರ್ಹವಿರುವವರು ತಕ್ಷಣವೇ ತಮ್ಮಹೆಸರನ್ನು ನೋಂದಾಯಿಸಿ, ಲಸಿಕೆ ಪಡೆಯಬೇಕು ಎಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ತಿಳಿಸಿದ್ದಾರೆ.
ಭಾರತವು ಎಪ್ರಿಲ್ 1ರಿಂದ 45ಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಲಸಿಕೆ ನೀಡಲು ನಿರ್ಧರಿಸುವ ಮೂಲಕ ಲಸಿಕೆ ನೀಡಿಕೆ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲಿದೆ.
ಕೋವಿಡ್-19 ಭೀತಿ ಮತ್ತೆ ಎದುರಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರವು ಹೋಳಿ ಹಬ್ಬಕ್ಕಿಂತ ಮೊದಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪೂರ್ವಾನುಮತಿ ಇಲ್ಲದೆ ಮೆರವಣಿಗೆಯನ್ನು ನಡೆಸುವಂತಿಲ್ಲ. 60ಕ್ಕಿಂತ ಹೆಚ್ಚಿನ ವಯಸ್ಸಿನವರು, 10 ವರ್ಷಕ್ಕಿಂತ ಕೆಳಗಿನವರು, ಇತರ ಕಾಯಿಲೆ ಪೀಡಿತರು ಹೋಳಿಯಲ್ಲಿ ಭಾಗವಹಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.