HEALTH TIPS

ಇ.ಡಿ.ಎಂದರೆ ಎಲೆಕ್ಷನ್ ಡ್ಯೂಟಿ-ಆದ್ದರಿಂದ ಕೇರಳದತ್ತ ಅವರು ಮುಖಮಾಡುತ್ತಿದ್ದಾರೆ-ಸೀತಾರಾಮ ಯೆಚೂರಿ

                          

          ತಿರುವನಂತಪುರ: ಜಾರಿ ನಿರ್ದೇಶನಾಲಯ ಅಥವಾ ಇ.ಡಿ. ಎಂದರೆ ಸಂಕ್ಷಿಪ್ತವಾಗಿ ಎಲೆಕ್ಷನ್ ಡ್ಯೂಟಿ ಎಂದು ಅರ್ಥ. ಹಾಗೆಂದು ಇದನ್ನು ಕರ್ತವ್ಯವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಇ.ಡಿ. ಕೇರಳದತ್ತ ಮುಖಮಾಡುತ್ತಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ವ್ಯಂಗ್ಯವಾಡಿದ್ದಾರೆ. 

        ವಾಮನಪುರಂ ಕ್ಷೇತ್ರ ಎಲ್‍ಡಿಎಫ್ ಅಭ್ಯರ್ಥಿ ಡಿ.ಕೆ. ಮುರಳಿ ಅವರ ಚುನಾವಣಾ ಪ್ರಚಾರದ ಅಂಗವಾಗಿ ವೆಂಚರಮ್ಮೂಡಿನಲ್ಲಿ ಯೆಚೂರಿ ಮಾತನಾಡುತ್ತಿದ್ದರು. ಬಿಜೆಪಿಯನ್ನು ಸೋಲಿಸಿದರೆ ಕೇರಳ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ ಎಂದರು.

        ಎಲ್‍ಡಿಎಫ್ ನ ಗೆಲುವು ಕೇರಳಕ್ಕೆ ಮಾತ್ರವಲ್ಲ ಇಡೀ ದೇಶಕ್ಕೂ ಅಗತ್ಯವಾಗಿದೆ. ಈ ತೀರ್ಪು ಸಾಂವಿಧಾನಿಕ ಮೌಲ್ಯಗಳು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವ ಹೋರಾಟವನ್ನು ಬಲಪಡಿಸುತ್ತದೆ. ಭಾರತದಲ್ಲಿ ಮೋದಿ ಸರ್ಕಾರಕ್ಕೆ ಪರ್ಯಾಯ ಮಾರ್ಗವಿದೆ ಎಂದು ಕೇರಳದ ಪಿಣರಾಯಿ ಸರ್ಕಾರ ತೋರಿಸಿದೆ. ಕೇರಳದಲ್ಲೂ ಜಿಹಾದ್ ಕಾನೂನು ತರಲಿದೆ ಎಂದು ಬಿಜೆಪಿ ಹೇಳಿದೆ. ಸಂವಿಧಾನವು ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ತನ್ನ ಸ್ವಂತ ಇಚ್ಚೆಯಂತೆ ಮದುವೆಯಾಗುವ ಹಕ್ಕನ್ನು ನೀಡುತ್ತದೆ. ಇದನ್ನು ನಿರಾಕರಿಸುವ ಅಧಿಕಾರ ಬಿಜೆಪಿಗೆ ಇಲ್ಲ ಎಂದು ಯೆಚೂರಿ ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries