HEALTH TIPS

ಎನ್‍ಡಿಎ ದೇಶದ ಒಳಗೆ ಅಥವಾ ಹೊರಗಿನ ಭಯೋತ್ಪಾದಕರಿಗೆ ಹೆದರುವುದಿಲ್ಲ; ವಿ. ಮುರಳೀಧರನ್

        ತಿರುವನಂತಪುರ: ಎನ್‍ಡಿಎ ದೇಶದ ಒಳಗೆ ಅಥವಾ ಹೊರಗಿನ ಯಾವುದೇ ಭಯೋತ್ಪಾದಕರಿಗೆ ಹೆದರುವುದಿಲ್ಲ ಎಂದು ಕೇಂದ್ರ ಸಚಿವ ವಿ. ಮುರಲೀಧರನ್ ಹೇಳಿರುವರು. ಲವ್ ಜಿಹಾದ್ ನ್ನು ಅನುಮತಿಸಲಾಗುವುದಿಲ್ಲ ಮತ್ತು ಲವ್ ಜಿಹಾದ್ನಲ್ಲಿ ಜೋಸ್ ಕೆ ಮಾಣಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಕಣ್ಣುಮುಚ್ಚಿ ನೋಡಿದ್ದಾರೆ ಎಂದು ಅವರು ಹೇಳಿದರು.

      ತಿರುವನಂತಪುರದಲ್ಲಿ ಎನ್‍ಡಿಎ ಅಭ್ಯರ್ಥಿಗಳ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. 

        ನೇಮಂ ಕ್ಷೇತ್ರದಲ್ಲಿ ಒ.ರಾಜಗೋಪಾಲ್ ಅವರ ಅಭಿವೃದ್ದಿ ಪರ ಚಟುವಟಿಕೆಗೆ ಮುಂದುವರಿಕೆಯಾಗಿ ಅರ್ಹ ವ್ಯಕ್ತಿ ಕುಮ್ಮನಂ ರಾಜಶೇಖರನ್ ಆಗಿದ್ದಾರೆ. ಸಮೀಕ್ಷೆಗಳನ್ನು ನೇಮಂನ ಮತದಾರರು ತಿರಸ್ಕರಿಸುತ್ತಾರೆ. ಶಿವಂಕುಟ್ಟಿ ಮತ್ತು ಕೆ ಮುರಲೀಧರನ್ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತಳ್ಳಲ್ಪಡುತ್ತಾರೆ ಎಂದು ಮುರಲೀಧರನ್ ಅಪಹಾಸ್ಯ ಮಾಡಿದರು. ನೇಮಂ ನ ಶಾಸಕ ಒ. ರಾಜಗೋಪಾಲ್, ಕುಮ್ಮನಂ ರಾಜಶೇಖರನ್ ಮತ್ತು ವಿಜಯನ್ ಥಾಮಸ್ ಉಪಸ್ಥಿತರಿದ್ದರು.

         ಈ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ ರಾಜ್ಯದಲ್ಲಿ ಬಿಜೆಪಿಯ ಅಂಗಸಂಸ್ಥೆ ಎಂದು ಆರೋಪಿಸಿದ್ದರು. ಮುರಲೀಧರನ್ ಈ ಬಗ್ಗೆ ಮಾತನಾಡಿ ಸಿಪಿಎಂ ಮಾರಾಟಕ್ಕಿರುವ ಒಂದು ಪಕ್ಷವಾಗಿದೆ. ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಹೇಳಿಕೆಯನ್ನು ತಿರುಚುವ ಮೂಲಕ ತಪ್ಪು ಅಭಿಪ್ರಾಯಗಳಿಗೆ ಸಿಪಿಎಂ ಹವಚಣಿಸುತ್ತಿದೆ. ಮತ್ತು ಪಿಣರಾಯಿ ವಿಜಯನ್ ಕತ್ತೆತ್ತಿ ಉಗುಳುವುದನ್ನು ನಿಲ್ಲಿಸಬೇಕು ಎಂದು ಮುರಲೀಧರನ್ ಕಟುವಾಗಿ ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries