ತಿರುವನಂತಪುರಂ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಪ್ರಾರಂಭವಾಗಲಿದೆ. ಕೊರೋನಾ ಮಾನದಂಡಗಳಿಗೆ ಅನುಸಾರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಅಭ್ಯರ್ಥಿಯೊಂದಿಗೆ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಆಯ್ಕೆದಾರರನ್ನು ಸಂಪರ್ಕಿಸಲು ಅವಕಾಶವಿರುತ್ತದೆ. ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು.
ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ರಸ್ತೆ ಪ್ರಚಾರ-ಪ್ರದರ್ಶನಗಳು ಸೇರಿದಂತೆ ಕಿಕ್ಕಿರಿದ ಜನಸೇರಿಸುವಿಕೆ ಇರಬಾರದೆಂದೂ ಸೂಚಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 19 ಆಗಿದೆ. 20 ರಂದು ಪರಿಶೀಲನೆ ನಡೆಯಲಿದೆ. ವಾಪಸಾತಿಗೆ ಕೊನೆಯ ದಿನಾಂಕ 22 ಆಗಿದೆ.
ಕೊರೋನದ ಹಿನ್ನೆಲೆಯಲ್ಲಿ ಕೇರಳದ ಮತದಾನ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಳಗೊಳಿಸಲಾಗಿದೆ. ಕೇರಳದಲ್ಲಿ 40771 ಮತದಾನ ಕೇಂದ್ರಗಳಿವೆ.