ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಸಿಪಿಐ (ಎಂ) ಪರಸ್ಪರ ಮೈತ್ರಿ ಇದೆ ಎಂದು ಆರ್.ಎಸ್.ಎಸ್.ಮುಖಂಡ ಬಾಲಶಂಕರ್ ಮಾಡಿದ್ದ ಆರೋಪಗಳನ್ನು ಆರ್.ಎಸ್.ಎಸ್. ನಾಯಕತ್ವ ನಿರಾಕರಿಸಿದೆ.ಬಿಜೆಪಿ ನಿಶ್ಚಯಿಸಿರುವ ವ್ಯಕ್ತಿಗಳನ್ನೇ ಆರ್.ಎಸ್.ಎಸ್.ಅನುಮೋದಿಸುತ್ತದೆ. ಆದರೆ ಬಾಲಶಂಕರ್ ನೀಡಿರುವ ಹೇಳಿಕೆ ಬಾಲಿಶವಾದುದು ಎಂದು ಆರ್.ಎಸ್.ಎಸ್. ಪ್ರಾಂತ್ಯ ಕಾರ್ಯವಾಹ್ ಗೋಪಾಲನ್ ಕುಟ್ಟಿ ಮಾಸ್ಟರ್ ಹೇಳಿರುವರು.
ಬಾಲಶಂಕರ್ ಅವರ ಉಮೇದುವಾರಿಕೆ ಬಗ್ಗೆ ತನಗೆ ಏನೂ ತಿಳಿದಿಲ್ಲ ಮತ್ತು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ಅವರು ಹೇಳಿದರು. ಅಭ್ಯರ್ಥಿಗಳನ್ನು ದೆಹಲಿಯ ಬಿಜೆಪಿ ನಾಯಕತ್ವ ನಿರ್ಧರಿಸುತ್ತದೆ ಮತ್ತು ಅವರಿಗೆ ತಿಳಿದಿದ್ದರೆ, ಹೆಸರುಗಳು ಪಟ್ಟಿಯಲ್ಲಿರುತ್ತವೆ ಎಂದು ಅವರು ಹೇಳಿದರು.
ಬಾಲಶಂಕರ್ ಅವರು ಒಂದಷ್ಟು ಕಾಲ ಓರ್ಗನೈಸರ್ ನಲ್ಲಿದ್ದರು. ಮತ್ತು ಆರ್.ಎಸ್.ಎಸ್. ಅಲ್ಲದ ಜನರೂ ಓರ್ಗನೈಸರ್ ನ ಸಂಪಾದಕರಾಗಿದ್ದರು ಎಂದು ಅವರು ಹೇಳಿದರು.