ಕೊಚ್ಚಿ: ಕೇರಳ, ಕರ್ನಾಟಕ, ದೆಹಲಿಗಳಲ್ಲಿ ರಾಷ್ಟ್ರೀಯ ತನಿಖಾ ದಳ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿದೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಐಎಸ್ ಜಾಲಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಎನ್ಐಎ ದೆಹಲಿ ಘಟಕ ಪ್ರಕರಣ ದಾಖಲಿಸಿಕೊಂಡಿತ್ತು. ಓರ್ವ ಐಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದ ನಂತರ ಆತ ನೀಡಿದ ಹೆಚ್ಚಿನ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಎನ್ಐಎ ದಾಳಿಗೆ ಕೆಲವರು ಪ್ರತಿಭಟನೆ ನಡೆಸಿದ ಘಟನೆಯೂ ಕೇರಳದಲ್ಲಿ ನಡೆದಿದೆ.
ಐಎಸ್ ಸೇರಿಕೊಂಡಿದ್ದವರ ಪೈಕಿ ಕೆಲವರು ಭಾರತದಲ್ಲೇ ಇದ್ದಾರೆ ಮತ್ತೆ ಕೆಲವರು ವಿದೇಶಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದಕ್ಕಾಗಿ ಐಎಸ್ ಯತ್ನಿಸುತ್ತಿದೆ ಎಂಬುದು ಈ ದಾಳಿಯ ಮೂಲಕ ತಿಳಿದುಬಂದಿದೆ.
ಕೇರಳದ ಕೊಲ್ಲಂ, ಮಲಪ್ಪುರಂ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆದಿದೆ.