ಪತ್ತನಂತಿಟ್ಟು: ವಿಷು ಹಬ್ಬದ ಅಂಗವಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಏ. 10ರಂದು ಗರ್ಭಗುಡಿ ಬಾಗಿಲು ತೆರೆದುಕೊಳ್ಳಲಿದೆ. ಅಂದು ಸಾಯಂಕಾಲ 5ಕ್ಕೆ ತಂತ್ರಿವರ್ಯರ ಉಪಸ್ಥಿತಿಯಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ಜಯರಾಜ್ ಪೋತ್ತಿ ಗರ್ಭಗುಡಿ ಬಾಗಿಲು ತೆರೆಯಲಿದ್ದಾರೆ. ಅಂದು ರಾತ್ರಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದಿಲ್ಲ.
11ರಂದು ಬೆಳಗ್ಗೆ ತುಪ್ಪಾಭಿಷೇಕ ಆರಂಭಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸಿದ ತಲಾ 10ಸಾವಿರ ಮಂದಿಗೆ ಪ್ರತಿ ದಿನ ಶ್ರೀದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತಾದಿಗಳಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಏ. 14ರಂದು ವಿಷುಕಣಿ ಉತ್ಸವ ನಡೆಯಲಿದೆ. ವಿಷು ಮಹೋತ್ಸವದ ಎಂಟು ದಿವಸಗಳ ಕಾಲ ಉದಯಾಸ್ತಮಾನ ಸೇವೆ, ಮೆಟ್ಟಿಲುಪೂಜೆ ಸೇರಿದಂತೆ ವಿಶೇಷ ಸೇವೆ ನಡೆಯಲಿದೆ. 18ರಂದು ರಾತ್ರಿ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿಬಾಗಿಲು ಮುಚ್ಚಲಾಗುವುದು. ಮುಂದೆ ಮಾಸಿಕ ಪೂಜೆಗಾಗಿ ಮೇ 14ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು.