ತಿರುವನಂತಪುರಂ: ತಿರುವಾಂಕೂರು ದೇವಸ್ವಂ ಅಡಿಯಲ್ಲಿ ಕಾರ್ಯಾಚರಿಸುವ ದೇವಾಲಯಗಳಲ್ಲಿ ಆರ್.ಎಸ್.ಎಸ್. ಶಾಖೆಗಳನ್ನು ನಿಷೇಧಿಸಲಾಗಿದೆ. ರಾಜ್ಯದ ಸುಮಾರು 1240 ದೇವಾಲಯಗಳಲ್ಲಿ ಆರ್ಎಸ್ಎಸ್ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ.
ದೇವಾಲಯದ ಅಂಗಳದಲ್ಲಿ ಆರ್.ಎಸ್.ಎಸ್. ಶಾಖೆಗಳ ಶಾರೀರಿಕ್ ಗಳಿಗೆ ಅನುಮತಿ ಇರುವುದಿಲ್ಲ. ನಿಷೇಧವನ್ನು ಉಲ್ಲಂಘಿಸಿ ಯಾವುದೇ ದೇವಾಲಯದಲ್ಲಿ ಯಾವುದೇ ಶಾಖೆ ಚಟುವಟಿಕೆ ಅಥವಾ ಸಾಮೂಹಿಕ ಶಾರೀರಿಕ್ ನಡೆಯುತ್ತಿದ್ದರೆ ಅವನ್ನು ತಡೆಯಲು ದೇವಾಲಯದ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಆಯುಕ್ತರ ಕಚೇರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ನೌಕರರು ವಿಫಲವಾದರೆ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೇವಾಲಯದ ಆಚರಣೆಗಳನ್ನು ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಶಸ್ತ್ರಾಸ್ತ್ರಗಳನ್ನು ಬಳಸಬಾರದು. ಈ ಹಿಂದೆ ದೇವಸ್ವಂ ಮಂಡಳಿಯು ದೇವಾಲಯಗಳಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡುವುದನ್ನು ನಿಷೇಧಿಸಿತ್ತು. ಆದರೆ ಅದನ್ನು ಜಾರಿಗೆ ತರಲು ಸರ್ಕಾರವಾಗಲಿ, ಮಂಡಳಿಗಾಗಲಿ ಈವರೆಗೆ ಸಾಧ್ಯವಾಗಿಲ್ಲ.