ನವದೆಹಲಿ : ರಸಗೊಬ್ಬರಗಳ ಬೆಲೆಯನ್ನು ಹೆಚ್ಚಿಸಬಾರದು ಎಂದು ಭಾರತ ಸರ್ಕಾರ ರಸಗೊಬ್ಬರ ಉತ್ಪದಾಕ ಕಂಪೆನಿಗಳಿಗೆ ಹೇಳಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
ಡೈ ಅಮೋನಿಯಂ ಫಾಸ್ಫೇಟ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿವೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಉತ್ಪಾದಕರೊಂದಿಗೆ ಇಂದು ಸಭೆ ನಡೆಸಿದ ಸಚಿವರು, 'ಪ್ರಸ್ತುತ ಸಂದರ್ಭಗಳಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ತಕ್ಷಣದ ಹೆಚ್ಚಳ ಮಾಡದಿರುವಂತೆ ನಿರ್ಧರಿಸಲಾಗಿದೆ' ಎಂದು ಹೇಳಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಪೊಟ್ಯಾಶ್ ಮತ್ತು ಫಾಸ್ಫೇಟ್ ಬೆಲೆಗಳು ಮೇಲಕ್ಕೇರಿದ ನಂತರ ರಸಗೊಬ್ಬರ ಕಂಪೆನಿಗಳು ಈ ವಾರ ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿ ಬೆಲೆ ಏರಿಸಿದ್ದವು ಎಂದು ವರದಿಗಳು ಸೂಚಿಸಿದ್ದವು.
ಷೇರು ಮಾರುಕಟ್ಟೆಯಲ್ಲಿ ದೀಪಕ್ ಫರ್ಟಿಲೈಸರ್ಸ್ನ ಷೇರುಗಳ ಬೆಲೆ ಶೇ 3.63 ರಷ್ಟು, ರಾಮ ಫಾಸ್ಫೇಟ್ಸ್ನ ಷೇರುಗಳು ಶೇ .2.73 ರಷ್ಟು, ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಕಂಪೆನಿಯ ಷೇರುಗಳು ಶೇ. 3 ರಷ್ಟು ಮತ್ತು ಎಸ್ಪಿಐಸಿಯ ಷೇರುಗಳು ಶೇ 3.3 ರಷ್ಟು ಕುಸಿದಿವೆ ಎನ್ನಲಾಗಿದೆ.