HEALTH TIPS

ಸಂಕಷ್ಟದಲ್ಲಿರುವ ಕೃಷಿಕರಿಗೆ ಸಾಂತ್ವನ ಸ್ಪರ್ಶ ನಿಡಲು ಜಾರಿಯಾಗಲಿದೆ'ಕಾಸರಗೋಡು ಮರಗೆಣಸು ಚಾಲೆಂಜ್'

           ಕಾಸರಗೋಡು: ಕೋವಿಡ್ ಹಾವಳಿ, ಲಾಕೌ ಡೌನ್, ಅಕಾಲಿಕ ಮಳೆ ಸಹಿತ ವಿವಿಧ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಿಬ್ಬಂದಿ'ಕಾಸರಗೋಡು ಮೆರಗೆಣಸು ಚಾಲೆಂಜ್'ಏರ್ಪಡಿಸಲಿದ್ದಾರೆ.

        ಕಳೆದ ವರ್ಷ 'ಸುಭಿಕ್ಷ ಕೇರಳಂ'ಯೋಜನೆಯನ್ವಯ 1275 ಹೆಕ್ಟೇರ್ ಜಾಗದಲ್ಲಿ ನೂತನವಾಗಿ ಕೃಷಿ ಚಟುವಟಿಕೆ ನಡೆಸಿ ಕಾಸರಗೋಡು ಜಿಲ್ಲೆ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿತ್ತು. ಇದರಲ್ಲಿ 300 ಹೆಕ್ಟೇರ್ ಜಾಗದಲ್ಲಿ ಗೆಡ್ಡೆಗೆಣಸಿಗೆ ಆದ್ಯತೆ ನೀಡಲಾಗಿದ್ದು, ಮರಗೆಣಸಿನ ಕೃಷಿ ಈ ನಿಟ್ಟಿನಲ್ಲಿ ಪ್ರಧಾನವಾಗಿತ್ತು. ಪ್ರಸಕ್ತ ಕಾರಡ್ಕ ಬ್ಲೋಕ್‍ನ ಬೇಡಡ್ಕ, ಕುತ್ತಿಕೋಲು ಪಂಚಾಯಿತಿಗಳಲ್ಲಿ, ಪರಪ್ಪ ಬ್ಲೋಕ್ ನ ಬಳಾಲ್, ಕಳ್ಳಾರ್, ಪನತ್ತಡಿ, ವೆಸ್ಟ್ ಏಳೇರಿ, ಕೋಡೋಂ-ಬೇಳೂರು, ಈಸ್ಟ್ ಏಳೇರಿ, ಕಿನಾನೂರು- ಕರಿಂದಳಂ ಪಂಚಾಯಿತಿಗಳಲ್ಲಿ, ನೀಲೇಶ್ವರ ಬ್ಲೋಕ್ ನ ಕಯ್ಯೂರು-ಚೀಮೇನಿ ಪಂಚಾಯಿತಿಯತಿ ವ್ಯಾಪ್ತಿಯಲ್ಲಿ 100 ಟನ್ ಗೂ ಅಧಿಕ ಮರಗೆಣಸು ಕೊಯ್ಲು ನಡೆದಿದೆ.

            ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳ, ರೆಸಿಡೆನ್ಶಿಯಲ್ ಅಸೊಸಿಯೇಶನ್ ಗಳ ಸಹಬಾಗಿತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಬೆಳೆಯಲಾದ ಫಾಂ ಫ್ರೆಷ್ ಮರಗೆಣಸು ಜನತೆಗೆ ನೇರವಾಗಿ ತಲಪಿಸುವ ನಿಟ್ಟಿನಲ್ಲಿ 'ಕಾಸರಗೋಡು ಮರಗೆಣಸು ಚಾಲೆಂಜ್' ನಡೆಸಲು ಕೃಷಿ ಇಲಾಖೆ ಸಿದ್ಧವಾಗಿದೆ. ಇದರ ಅಂಗವಾಗಿ ಆಸಕ್ತರು ಕೃಷಿ ಇಲಾಖೆಯ ಅಧಿಕಾರಿಗಳನ್ನು

ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ಕಾರಡ್ಕ ಬ್ಲೋಕ್ : 9383471976, ಪರಪ್ಪ ಬ್ಲೋಕ್ : 938371976 ಹಾಗೂ ನೀಲೇಶ್ವರ ಬ್ಲೋಕ್ : 9383472331.ನಂಬರ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries