HEALTH TIPS

ರಾಜ್ಯದಲ್ಲಿ ಇಂದು 12,200 ಮಂದಿಗೆ ಕೋವಿಡ್ ಪತ್ತೆ: 12,502 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ.10.48

                                                      

               ತಿರುವನಂತಪುರ: ರಾಜ್ಯದಲ್ಲಿ ಇಂದು 12,220 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1861, ಕೋಝಿಕೋಡ್ 1428, ತ್ರಿಶೂರ್ 1307, ಎರ್ನಾಕುಳಂ 1128, ಕೊಲ್ಲಂ 1012, ತಿರುವನಂತಪುರ 1009, ಪಾಲಕ್ಕಾಡ್ 909, ಕಣ್ಣೂರು 792, ಕಾಸರಗೋಡು 640, ಕೊಟ್ಟಾಯಂ 609, ಆಲಪ್ಪುಳ 587, ವಯನಾಡ್ 397, ಪತ್ತನಂತಿಟ್ಟು 299, ಇಡುಕ್ಕಿ 242 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

           ಕಳೆದ 24 ಗಂಟೆಗಳಲ್ಲಿ 1,16,563 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.48 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 2,44,24,563 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

                 ಇಂದು, 97 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 14,586 ಕ್ಕೆ ಏರಿಕೆಯಾಗಿದೆ. 

       ಇಂದು, ಸೋಂಕು ಪತ್ತೆಯಾದವರಲ್ಲಿ 71 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 11,497 ಮಂದಿ ಜನರಿಗೆ ಸೋಂಕು ತಗುಲಿತು. 612 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1812, ಕೋಝಿಕೋಡ್ 1402, ತ್ರಿಶೂರ್ 1300, ಎರ್ನಾಕುಳಂ 1118, ಕೊಲ್ಲಂ 1010, ತಿರುವನಂತಪುರ 933, ಪಾಲಕ್ಕಾಡ್ 529, ಕಣ್ಣೂರು 718, ಕಾಸರಗೋಡು 635, ಕೊಟ್ಟಾಯಂ 566, ಆಲಪ್ಪುಳ 568, ವಯನಾಡ್ 386, ಪತ್ತನಂತಿಟ್ಟು 287, ಇಡುಕ್ಕಿ 233 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

               ಇಂದು  40 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಕಣ್ಣೂರು 12, ವಯನಾಡ್ 6, ಪತ್ತನಂತಿಟ್ಟು, ಕಾಸರಗೋಡು ತಲಾ 5, ತಿರುವನಂತಪುರ, ತ್ರಿಶೂರ್ ತಲಾ 3, ಮಲಪ್ಪುರಂ 2, ಕೊಲ್ಲಂ, ಎರ್ನಾಕುಳಂ, ಪಾಲಕ್ಕಾಡ್ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಕೋವಿಡ್ ದೃಢ|ಪಡಿಸಲಾಗಿದೆ. 

                 ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 12,502 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 896, ಕೊಲ್ಲಂ 1637, ಪತ್ತನಂತಿಟ್ಟು 440, ಆಲಪ್ಪುಳ 898, ಕೊಟ್ಟಾಯಂ 390, ಇಡುಕಿ 218, ಎರ್ನಾಕುಳಂ 1524, ತ್ರಿಶೂರ್ 1334, ಪಾಲಕ್ಕಾಡ್ 1040, ಮಲಪ್ಪುರಂ 1382, ಕೋಝಿಕೋಡ್ 1250, ವಯನಾಡ್ 332, ಕಣ್ಣೂರು 606, ಕಾಸರಗೋಡು 555 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,14,844 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 29,35,423 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

                ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,86,876 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,62,022 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,854 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2279 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                  ಟಿಪಿಆರ್ 5ಕ್ಕಿಂತ ಕೆಳಗೆ 86, 5 ರಿಂದ 10 ರ ನಡುವೆ 382, 10 ರಿಂದ 15 ರ ನಡುವೆ 370 ಮತ್ತು ಟಿಪಿಆರ್. 15 ಮತ್ತು ಅದಕ್ಕಿಂತ ಮೇಲೆ  196 ಸ್ಥಳೀಯಾಡಳಿತ ಸಂಸ್ಥೆಗಳು ಇದೀಗ ರಾಜ್ಯದಲ್ಲಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries