HEALTH TIPS

ಕೆ.ಎಸ್.ಆರ್.ಟಿ.ಸಿ.ಯಿಂದ ಬೆಂಗಳೂರು ಸೇವೆ ಪ್ರಾರಂಭ: ಮೊದಲ ದಿನ ಪೂರ್ತಿ ಆಸನ ಬುಕ್ಕಿಂಗ್

               ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ. ತನ್ನ ತಿರುವನಂತಪುರಂ-ಬೆಂಗಳೂರು ಸೇವೆಯನ್ನು ಪುನರಾರಂಭಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಈ ಸೇವೆಗಳು ಮೊಟಕುಗೊಂಡಿದ್ದವು. ಕೋವಿಡ್ ಮಾನದಂಡಗಳಲ್ಲಿ ಸಡಿಲಿಕೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಕೇರಳ-ಕರ್ನಾಟಕ ರಾಜ್ಯಗಳ ಜಂಟಿ ತೀರ್ಮಾನದ ಆಧಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಸೇವೆಯನ್ನು ಪ್ರಾರಂಭಿಸಲಾಯಿತು. ಏಪ್ರಿಲ್ 9 ರಿಂದ ಸ್ಥಗಿತಗೊಂಡಿದ್ದ ಈ ಸೇವೆಯನ್ನು ಪುನರಾರಂಭಿಸಲಾಯಿತು.

            ಇಂದು (ಭಾನುವಾರ) ಸಂಜೆ 5 ಗಂಟೆಗೆ ತಿರುವನಂತಪುರಂನಿಂದ ಸೇವೆ ಪ್ರಾರಂಭವಾಯಿತು. ಮೊದಲ ದಿನ, ಬೆಂಗಳೂರು ಸೇವೆ ಕೊಲ್ಲಂ, ಆಲಪ್ಪುಳ, ವಿಟ್ಟಿಲಾ, ತ್ರಿಶೂರ್, ಕೋಝಿಕೋಡ್, ಸುಲ್ತಾನ್ ಬತ್ತೇರಿ, ಮೈಸೂರು ಮತ್ತು ಮಂಡ್ಯದ ಮೂಲಕ ತೆರಳಿದೆ. ಮೊದಲ ದಿನ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಸೇವೆಗಳನ್ನು ನಡೆಸಲಾಗುವುದು.

                   ತಮಿಳುನಾಡು ಸರ್ಕಾರ ಅಂತರರಾಜ್ಯ ಸಾರಿಗೆಗೆ ಇನ್ನೂ ಅನುಮತಿ ನೀಡಿಲ್ಲ. ಅನುಮತಿ ದೊರೆತರೆ ಪಾಲಕ್ಕಾಡ್ ಮತ್ತು ಸೇಲಂ ಮೂಲಕ ಬೆಂಗಳೂರು  ಸೇವೆ ಪ್ರಾರಂಭಿಸಬಹುದು. ಮೊದಲ ಹಂತವಾಗಿ ತಮಿಳುನಾಡಿಗೆ ಸರ್ಕಾರಿ ನೌಕರರಿಗೆ ಬಾಂಡ್ ಸೇವೆಯನ್ನು ನಡೆಸಲು ಕೊಯಮತ್ತೂರು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪಾಲಕ್ಕಾಡ್-ಕೊಯಮತ್ತೂರು ಬಾಂಡ್ ಸೇವೆಗಳು ಸೋಮವಾರದಿಂದ ಪ್ರಾರಂಭವಾಗಲಿವೆ. ಕೆಲವೇ ದಿನಗಳಲ್ಲಿ ತಮಿಳುನಾಡು ಅಂತರರಾಜ್ಯ ಸಾರಿಗೆಗೆ ಅನುಮತಿ ಪಡೆಯುವ ಭರವಸೆಯನ್ನು ಕೆ.ಎಸ್.ಆರ್.ಟಿ.ಸಿ. ಹೊಂದಿದೆ.

                 ದೂರ ಪ್ರಯಾಣದ ಬಸ್‍ಗಳ ಸಮಯ ಮತ್ತು ಟಿಕೆಟ್‍ಗಳನ್ನು ಮುಂಚಿತವಾಗಿ www.online.keralartc.com ಮತ್ತು ಮೊಬೈಲ್ ಅಪ್ಲಿಕೇಶನ್ '“Ente KSRTC” ' ಮೂಲಕ ಕಾಯ್ದಿರಿಸಬಹುದು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries