ಕುಂಬಳೆ: ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಬಳಗ ವಿದ್ಯಾನಗರ ಇದರ ಸಹಕಾರದೊಂದಿಗೆ ನಡೆಯುತ್ತಿರುವ ಮಾನಸೋಲ್ಲಾಸ ಸರಣಿ ಜಾಲಗೋಷ್ಠಿಯ ಎರಡನೆಯ ಕಾರ್ಯಕ್ರಮವು ಜುಲೈ ಹತ್ತರಂದು ಬೆಳಗ್ಗೆ ಹತ್ತು ಗಂಟೆಗೆ ನಡೆಯಲಿದೆ.
'ಲಿಂಗ ಸಮಾನತೆ ಕಾನೂನು ಮತ್ತು ಸಾಂಸ್ಕøತಿಕ ನೆಲೆ' ಎಂಬ ವಿಷಯದಲ್ಲಿ ಮೈಸೂರು ಪೋಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ ಐ.ಪಿ.ಎಸ್ ಇವರು ಮಾತನಾಡುವರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ À ಡಾ. ರೆಮ ಎಂ ಉಪಸ್ಥಿತರಿರುವರು. ವಿಭಾಗದ ಮುಖ್ಯಸ್ಥÀ ಸುಜಾತ ಎಸ್ ಅಧ್ಯಕ್ಷತೆ ವಹಿಸುವರು. ಎಂ.ಎ ವಿದ್ಯಾರ್ಥಿಗಳಾದ ದಿವ್ಯಶ್ರೀ ಎಸ್, ದಿವ್ಯಶ್ರೀ ಎಂ, ದೀಪಿಕಾ ಎ, ಬೇಬಿ ಕೆ.ಎಸ್, ಭಾಗ್ಯಶ್ರೀ ಈ ಮುಂತಾದವರು ಕಾರ್ಯಕ್ರಮವನ್ನು ಮುನ್ನಡೆಸುವರು. ವಿಭಾಗದ ಅಧ್ಯಾಪಕರು ಉಪಸ್ಥಿತರಿರುವರು.
ಡಾ. ಧರಣಿದೇವಿ ಮಾಲಗತ್ತಿಯವರು ಸಾಹಿತಿಯಾಗಿ ದಕ್ಷ ಪೋಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡವರು. ಇಳಾಭಾರತಂ ಎಂಬುದು ಅವರ ಮಹಾಕಾವ್ಯ. ಕನ್ನಡ ತುಳು, ಇಂಗ್ಲಿಷ್, ಹೀಗೆ ಮೂರು ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. ಸೃಜನಶೀಲ ಹಾಗೂ ಸೃಜನೇತರ ಕೃತಿಗಳನ್ನು ಅವರು ರಚಿಸಿದ್ದು, ಇಪ್ಪತ್ತೆರಡು ಕೃತಿಗಳು ಈಗಾಗಲೇ ಪ್ರಕಟವಾಗಿವೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕನ್ನಡದ ಸಹೃದಯಿಗಳು ಭಾಗವಹಿಸಬೇಕೆಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.





