HEALTH TIPS

ಕೇರಳ ಎಡ ಪ್ರಜ್ಞೆಯ ಸಾಂಸ್ಕøತಿಕ ಮುಖಂಡರು ಕೇರಳಕ್ಕೆ ಮಾಡಿದ ಅವಮಾನ; ಯುವಮೋರ್ಚಾದಿಂದ ಪ್ರತಿಭಟನೆಯ ಎಚ್ಚರಿಕೆ

               ಇಡುಕ್ಕಿ: ವಾಳಯಾರ್ ಪ್ರಕರಣದಂತೆ ವಂದಿಪೆರಿಯಾರ್ ಘಟನೆಯನ್ನು ಮರೆಮಾಚಲು ಪ್ರಯತ್ನಿಸಲಾಗುತ್ತಿದೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಸಿ.ಆರ್.ಪ್ರಫುಲ್ ಕೃಷ್ಣನ್ ಹೇಳಿದ್ದಾರೆ. ವಂಡಿಪೇರಿಯಾರ್‍ನಲ್ಲಿ ಕೊಲೆಯಾದ ಮಗುವಿನ ಮನೆಗೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಶಾಸಕರು ಡಿವೈಎಫ್‍ಐ ನಾಯಕನನ್ನು ಉಳಿಸಲು ನೋಡುತ್ತಿದ್ದಾರೆ ಎಂಬ ಸ್ಥಳೀಯರ ಆರೋಪ ಗಂಭೀರವಾಗಿದೆ. ಒಬ್ಬ ರಾಜ್ಯ ಸಚಿವರು ಕೂಡ ಈ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.

                ವಂಡಿಪೆರಿಯಾರ್‍ನಲ್ಲಿ ಆರು ವರ್ಷದ ಬಾಲಕಿಯ ಕೊಲೆ ಸಾಂಸ್ಕೃತಿಕ ಕೇರಳಕ್ಕೆ ಆಘಾತವನ್ನುಂಟು ಮಾಡಿದೆ. ಎಳೆ ಕೂಸನ್ನೂ ಲೈಂಗಿಕವಾಗಿ ಬಳಸಿ ಹಿಂಸಿಸಿದ ಡಿವೈಎಫ್‍ಐ ನಾಯಕ ಆ ಸಂಘಟನೆಯ ರಾಕ್ಷಸೀಯ ಪ್ರವೃತ್ತಿಯ ದ್ಯೋತಕವಾಗಿದೆ. ಕೇರಳದಲ್ಲಿ ಇತ್ತೀಚೆಗೆ ವರದಿಯಾದ ಎಲ್ಲಾ ಅನೈತಿಕ ಅಪರಾಧ ಚಟುವಟಿಕೆಗಳಲ್ಲಿ ಆರೋಪಿಗಳ ಧ್ವಜ ಬಹುತೇಕ ಕೆಂಪು ಬಣ್ಣದ್ದಾಗಿದೆ ಎಂದವರು ತಿಳಿಸಿದರು.

                 ಬಣ್ಣ ಕೆಂಪು ಆಗಿದ್ದಾಗ ಪ್ರತಿಕ್ರಿಯಿಸುವ ಸಾಮಥ್ರ್ಯವನ್ನು ಕಳೆದುಕೊಳ್ಳುವ ಸಾಂಸ್ಕೃತಿಕ ವೀರರನ್ನು ಹೊಂದಿರುವ ರಾಜ್ಯವಿದು. ಆಯ್ದ ಪ್ರತಿಕ್ರಿಯೆಗಳನ್ನು ನೀಡುವ ಸಾಂಸ್ಕೃತಿಕ ಮುಖಂಡರ ಮುಖವಾಡಗಳನ್ನು ಕಿತ್ತುಹಾಕಬೇಕು. ವಂಡಿಪೇರಿಯಾರ್‍ನ ಆರೋಪಿ ನಾಯಕ ಅಪರಾಧವನ್ನು ಖಂಡಿಸಲು  ಡಿಫಿ ಕೂಡ ಸಿದ್ಧರಿಲ್ಲ ಎಂದು ಅವರು ಹೇಳಿದರು.

                 ಮುಂದಿನ ದಿನಗಳಲ್ಲಿ ವಂಡಿಪೇರಿಯಾರ್ ನಲ್ಲಿ ನಡೆದ ದುರಂತ ಘಟನೆಯ ಬಗ್ಗೆ ಮೌನವಾಗಿದ್ದ ಸಾಂಸ್ಕೃತಿಕ ಮುಖಂಡರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

             ಪ್ರಫುಲ್ ಅವರೊಂದಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಕೃಷ್ಣಕುಮಾರ್, ರಾಜ್ಯ ಸಮಿತಿ ಸದಸ್ಯ ಬಿನು ಜೆ. ಕೈಮಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸಂತೋಷ್ ಕುಮಾರ್, ಪ್ರಾದೇಶಿಕ ಕಾರ್ಯದರ್ಶಿ ಜೆ. ಪ್ರಿಯಾ ರೆಜಿ ಮತ್ತು ಕ್ಷೇತ್ರ ಅಧ್ಯಕ್ಷ ಕೆ.ಜಿ.ಅಜೇಶ್ ಕುಮಾರ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries