HEALTH TIPS

ಕೊಡಕರ ಮನಿ ಲಾಂಡರಿಂಗ್ ಪ್ರಕರಣ; ಕೆ ಸುರೇಂದ್ರನ್ ಬುಧವಾರ ವಿಚಾರಣೆಗೆ ಹಾಜರಾಗಲು ತನಿಖಾ ತಂಡ ಸೂಚನೆ

                   ತಿರುವನಂತಪುರ: ಕೊಡಕರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಬುಧವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ತ್ರಿಶೂರ್ ಪೆÇೀಲೀಸ್ ಕ್ಲ???ನಲ್ಲಿ ಬುಧವಾರ ಬೆಳಿಗ್ಗೆ 10.30 ಕ್ಕೆ ವಿಚಾರಣೆಗೊಳಪಡಿಸಲಾಗುವುದು.  ಇದಕ್ಕೂ ಮುನ್ನ ತನಿಖಾ ತಂಡ ಜುಲೈ 6 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಸುರೇಂದ್ರನ್ ಅವರು ಹಾಜರಾಗಲು ಸಾಧ್ಯವಿಲ್ಲ ಎಂದು ತನಿಖಾ ತಂಡಕ್ಕೆ ತಿಳಿಸಿದ್ದರು.

                       ಕೊಡಕರದಲ್ಲಿ ಅಪಘಾತವನ್ನು ಸೃಷ್ಟಿಸಿ 3.5 ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ನ್ಯಾಯಾಲಯದಲ್ಲಿ ದಾಖಲಾದ ಪೆÇೀಲೀಸ್ ವರದಿಯ ಪ್ರಕಾರ, ಈ ಹಣವನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿತು. ಹಣವನ್ನು ಲಾಂಡರಿಂಗ್ ಮಾಡಿ ಕರ್ನಾಟಕದಿಂದ ತರಲಾಯಿತು ಎನ್ನಲಾಗಿದೆ.

                  ಆದರೆ, ಕೊಡಕರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದಿರಲು ಬಿಜೆಪಿ ಕೋರ್ ಸಮಿತಿ ನಿರ್ಧರಿಸಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸರ್ಕಾರ ಮತ್ತು ಪೆÇೀಲೀಸರು ಪಕ್ಷವನ್ನು ಬೇಟೆಯಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

                  ಪ್ರಕರಣದ ತನಿಖೆಯ ಮೂಲಕ ಬಿಜೆಪಿ ನಾಯಕರ ಮೇಲೆ ಹಲ್ಲೆ ನಡೆಸಲು ರಾಜ್ಯ ಸರ್ಕಾರ ಮತ್ತು ಸಿಪಿಎಂ ಸಂಚು ರೂಪಿಸುತ್ತಿವೆ ಎಂಬುದು ಹಲವರ ಮುಖ್ಯ ಆರೋಪ. ಕೊಡಕರ ಪ್ರಕರಣದ ಆರಂಭದಲ್ಲಿ, ಬಿ.ಜೆ.ಪಿ ನಾಯಕರು ಯಾರೂ ಕೆ ಸುರೇಂದ್ರನ್ ಅವರನ್ನು ಬೆಂಬಲಿಸಲು ಸಿದ್ಧರಿಲ್ಲ ಎಂಬ ಸಂದೇಶ ನೀಡಿದ್ದರು ಎನ್ನಲಾಗಿದೆ. 

                 ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಮಾತ್ರ ಪತ್ರಿಕಾ ಪ್ರಕಟಣೆಯಲ್ಲಿ ಸುರೇಂದ್ರನ್ ಅವರನ್ನು ಬೆಂಬಲಿಸಿದ್ದರು. ಆದರೆ ಆ ಬಳಿಕ ನಡೆದ ಬಿಜೆಪಿ ಕೋರ್ ಸಭೆಯ ನಂತರ ಪಿ.ಕೆ.ಕೃಷ್ಣದಾಸ್, ಎ.ಎನ್. ರಾಧಾಕೃಷ್ಣನ್ ಮತ್ತು ಎಂ.ಟಿ.ರಮೇಶ್ ಸೇರಿದಂತೆ ನಾಯಕರು ಉಪಸ್ಥಿತರಿದ್ದು ಸುರೇಂದ್ರನ್ ಅವರನ್ನು ಬೆಂಬಲಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries