HEALTH TIPS

ಕೇರಳಕ್ಕೆ ಶೀಘ್ರದಲ್ಲೇ ಹೆಚ್ಚಿನ ಲಸಿಕೆಗಳ ಪೂರೈಕೆ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಭರವಸೆ

                   

             ನವದೆಹಲಿ: ಕೇರಳದಲ್ಲಿ ಉಂಟಾಗಿರುವ ಕೋವಿಡ್ ಲಸಿಕೆಗಳ ಕೊರತೆಯ ಬೇಗುದಿಯ ಬೆನ್ನಿಗೇ  ಹೆಚ್ಚಿನ ಕರೋನಾ ಲಸಿಕೆ ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಭರವಸೆ ನೀಡಿದೆ. ಎಡ ಸಂಸದರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾದ ವೇಳೆ ಹೆಚ್ಚಿನ ಲಸಿಕೆಗಳನ್ನು ವಿತರಿಸುವುದಾಗಿ ಘೋಷಿಸಿದರು.

             ಕೊರೋನಾ ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ ನಲ್ಲಿ ಕೇರಳ ಭಾರತಕ್ಕೆ ಮಾದರಿ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ ಎಂದು ಸಭೆಯ ನಂತರ ಸಂಸದರು ತಿಳಿಸಿದ್ದಾರೆ. ಲಸಿಕೆಯನ್ನು ವ್ಯರ್ಥ ಮಾಡದೆ ಗರಿಷ್ಠವಾಗಿ ಬಳಸಿದ್ದಕ್ಕಾಗಿ ಸಚಿವರು ಕೇರಳವನ್ನು ಶ್ಲಾಘಿಸಿದರು. ಕೊರೋನಾ ವಿಸ್ತರಣೆ ಮತ್ತು ಸಾವಿನ ಸಂಖ್ಯೆ ಬಗ್ಗೆ ಸಚಿವರು ಸಂಸದರಲ್ಲಿ ವಿಚಾರಿಸಿರುವರು ಎಂದು ಸಂಸದರು ಹೇಳಿದರು.

                  ಸಿಪಿಎಂ ರಾಜ್ಯಸಭಾ ಮುಖಂಡ ಎಲಮರ ಕರೀಮ್, ಸಂಸದರಾದ ಬಿನೊಯ್ ವಿಶ್ವಂ, ಎಂ.ವಿ.ಶ್ರೇಯಾಂಸ್ ಕುಮಾರ್, ಸೋಮಪ್ರಸಾದ್, ಜಾನ್ ಬ್ರಿಟ್ಟಾಸ್, ವಿ ಶಿವದಾಸನ್ ಮತ್ತು ಎ.ಎಂ.ಆರಿಫ್ ಆರೋಗ್ಯ ಸಚಿವರನ್ನು ಭೇಟಿಯಾದರು.

                     ಲಸಿಕೆ ಕೇರಳದಲ್ಲಿ ಬಳಸಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಘೋಷಿಸಿತ್ತು. ಕೇರಳ ಸುಮಾರು 10 ಲಕ್ಷ ಲಸಿಕೆ ಪ್ರಮಾಣವನ್ನು ತಡೆಹಿಡಿದಿದೆ ಎಂದು ಮನ್ಸುಖ್ ಮಾಂಡವಿಯ ಹೇಳಿದ್ದರು. ರಾಜ್ಯದಲ್ಲಿ ಕೊರೋನಾ ಪ್ರಸರಣದ ಹೆಚ್ಚಳಕ್ಕೆ ಇದು ಕಾರಣ ಎಂದವರು ಉಲ್ಲೇಖಿಸಿದ್ದರು. ನಿನ್ನೆ ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡಲಾಯಿತು. ಆದರೆ ಇಂದಿನಿಂದ ಲಸಿಕೆಯ ಲಭ್ಯತೆ ಪೂರ್ತಿ ಖಾಲಿಯಾಗಿರುವುದರಿಂದ ಸಂಸದರು ಹೆಚ್ಚಿನ ಲಸಿಕೆಗಳನ್ನು ಕೇಳಲು  ಆರೋಗ್ಯ ಸಚಿವರನ್ನು ಸಂಪರ್ಕಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries