HEALTH TIPS

ವ್ಯಾಕ್ಸಿನೇಷನ್ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ: ಟೀಕೆಗಳ ಬಳಿಕ ಜಿಲ್ಲಾಧಿಕಾರಿಗಳಿಂದ ಆದೇಶ ರದ್ದು

        

          ಕಣ್ಣೂರು/ಕಾಸರಗೋಡು: ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಲಸಿಕೆ ತೆಗೆದುಕೊಳ್ಳುವವರು ಕೊರೋನಾ ಪರೀಕ್ಷೆಗೆ ಒಳಗಾಗಬೇಕು ಎಂಬ ಜಿಲ್ಲಾಧಿಕಾರಿಗಳ  ವಿವಾದಾತ್ಮಕ ಆದೇಶವನ್ನು ಹಿಂಪಡೆಯಲಾಗಿದೆ.  ನಿರ್ಧಾgದ ಅಧಿಕೃತ ಆದೇಶದ ಮುಂಚಿತವಾಗಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಈ ಆದೇಶವನ್ನು ಹಿಂಪಡೆಯಲಾಗಿದೆ. ನಿನ್ನೆ ನಡೆದ ಪರಿಶೀಲನಾ ಸಭೆಯಲ್ಲಿ ಆದೇಶವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

                     ಲಸಿಕೆ ತೆಗೆದುಕೊಂಡ 72 ಗಂಟೆಗಳ ಒಳಗೆ ಮಾಡಿಸಿದ ಆರ್.ಟಿ.ಪಿ.ಸಿ.ಆರ್ ನಕಾರಾತ್ಮಕ ಪ್ರಮಾಣಪತ್ರ ಪಡೆಯುವುದು ಕಡ್ಡಾಯವೆಂದು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿಚಿತ್ರ ಆದೇಶ ಹೊರಡಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ  ಹೊಸ ಆದೇಶವು ಜನರು ಪಡೆಯುವ ಲಸಿಕೆಯನ್ನು ಉಚಿತವಾಗಿ ಪಡೆಯಲು ಪರೀಕ್ಷೆಗೆ ಹಣವನ್ನು ಖರ್ಚು ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬ ಆರೋಪಗಳು ಕೇಳಿಬಂದವು. 

              ಲಸಿಕೆ ಸ್ಲಾಟ್‍ಗಳು ದಿನಗಳ ಪ್ರಯತ್ನದ ನಂತರ ಲಭ್ಯವಿದೆ. ಈ ಮಧ್ಯೆ, ನೀವು ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಹೋದರೆ, ಫಲಿತಾಂಶವನ್ನು ಪಡೆಯಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರೊಂದಿಗೆ ಸ್ಲಾಟ್ ಗಳು ನಷ್ಟವಾಗುತ್ತದೆ  ಎಂದು ಜನರು ಹೇಳಿದ್ದಾರೆ. ಈ ಆದೇಶವನ್ನು ಜಾರಿಗೆ ತರಬಾರದು ಎಂದು ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ.ಪಿ.ವಿವ್ಯಾ ಸಾರ್ವಜನಿಕವಾಗಿ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ಧಾರ ಅಪ್ರಾಯೋಗಿಕ ಎಂದು ಡಿಎಂಒ ಹೇಳಿದ್ದರು. ಏತನ್ಮಧ್ಯೆ, ಆರೋಗ್ಯ ಸಚಿವರು ಆದೇಶವನ್ನು ಸ್ವಾಗತಿಸಿದ್ದರು. ಈ ಮಧ್ಯೆ ಜನರ ಆಕ್ರೋಶಗಳು ವ್ಯಕ್ತಗೊಳ್ಳುತ್ತಿರುವಂತೆ ಸ್ವತಃ ಮುಖ್ಯಮಂತ್ರಿಗಳೇ ನಿನ್ನೆ ಈ ಬಗ್ಗೆ ವಿಚಾರಿಸಿ ಆದೇಶ ಹಿಂಪಡೆಯಲು ಸೂಚಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries