ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಸಮಯದಲ್ಲಿ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಇರುವ ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಶ್ರೀ ದೇವಿ ಮಠ ಹಾಗೂ ಹಲವಾರು ವಸತಿಗಳಿರುವ ದೇವಳದ ಪರಿಸರಕ್ಕೆ ಕಾಸರಗೋಡು ಸಂಸದ ರಾಜ ಮೋಹನ್ ಉಣ್ಣಿತ್ತಾನ್ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು, ದೇವಳದ ಮೊಕ್ತೇಸ ಚಂದ್ರಶೇಖರ ಭಟ್, ರಘುವೀರ್ ನಾಯಕ್, ಮಧುಸೂದನ ಕಾಮತ್, ಮಾಜಿ ವಾರ್ಡ್ ಸದಸ್ಯ ಸುಧಾಕರ ಕಾಮತ್ ಸಂಸದರಿಗೆ ಮನವಿಯನ್ನು ನೀಡಿದರು. ಮನವಿಯನ್ನು ಸ್ವೀಕರಿಸಿದ ಸಂಸದರು ಕೇಂದ್ರ ಸರ್ಕಾರದ ರೈಲ್ವೆ ಮಂತ್ರಿ ಹಾಗೂ ರಸ್ತೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.


