ತಿರುವನಂತಪುರಂ: ಎರಡನೇ ಪಿಣರಾಯಿ ಸರ್ಕಾರದ ವಿಶೇಷ ಓಣಂ ಕಿಟ್ ವಿತರಣೆ ಆರಂಭಗೊಂಡಿದ್ದು, ಗೋಡಂಬಿ ಇರುವುದಿಲ್ಲ. ಕಿಟ್ ನಲ್ಲಿ ಸೇರಿಸಲು ಗೋಡಂಬಿ ಸಿಗದ ಕಾರಣ ಈ ಕ್ರಮವನ್ನು ಕೈಬಿಡಲಾಯಿತು. ಬದಲಾಗಿ ಹುಣಸೆ, ಗೋಧಿಹುಡಿ ಮತ್ತು ಸಕ್ಕರೆಯಂತವನ್ನು ಸೇರಿಸಬಹುದು.
ಓಣಂ ಕಿಟ್ ತಯಾರಿಗೆ ಸಂಬಂಧಿಸಿದಂತೆ ಸಪ್ಲೈಕೋ ಪ್ರಾದೇಶಿಕ ವ್ಯವಸ್ಥಾಪಕರು ಮತ್ತು ಇಲಾಖಾ ಮುಖ್ಯಸ್ಥರ ಸಭೆ ಕರೆಯಲಾಗಿದೆ. ಇಲ್ಲಿ ಗೋಡಂಬಿ ಲಭ್ಯತೆಯ ಕೊರತೆಯ ಬಗ್ಗೆ ಚರ್ಚಿಸಲಾಯಿತು. ನಂತರ ಸಭೆಯಲ್ಲಿ ಒಂದು ಉತ್ಪನ್ನವನ್ನು ಸೇರಿಸಲು ನಿರ್ಧರಿಸಲಾಯಿತು.
ಓಂಣಂ ಕಿಟ್ ಗೆ 50 ಗ್ರಾಂ ಗೋಡಂಬಿಯನ್ನು ನೀಡಬೇಕಿತ್ತು. ಆದರೆ ಈ ಕ್ರಮವನ್ನು ಕೈಬಿಟ್ಟ ನಂತರ, 50 ಗ್ರಾಂ ಚಾಹುಡಿ, 250 ಗ್ರಾಂ ಶಬರಿ ಹುಣಸೆ, 1 ಕೆಜಿ ಗೋಧಿಹುಡಿ ಮತ್ತು 1 ಕೆಜಿ ಸಕ್ಕರೆಯಂತಹ ಯಾವುದೇ ಉತ್ಪನ್ನವನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ, ಸಪ್ಲೈಕೋ ವ್ಯವಸ್ಥಾಪಕ ನಿರ್ದೇಶಕರು ಪ್ರಾದೇಶಿಕ ಡಿಪೆÇೀ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಗೋಡಂಬಿ ಸಿಗದ ಕಾರಣ ಓಣಂ ಕಿಟ್ ಪ್ಯಾಕಿಂಗ್ ವಿಳಂಬವಾಯಿತು. ಅದನ್ನೇ ಅನುಸರಿಸಿ ಬಿಜೆಪಿ ಸಭೆ ಕರೆದಿದೆ. ಈ ಬಾರಿ ಓಣಂಕಿಟ್ ನಲ್ಲಿ 15 ವಸ್ತುಗಳು ಇವೆ.