ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿರುವ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಲ್ಲಿ ನಿಗಾ ಪ್ರಬಲಗೊಳಿಸಲಾಗುವುದು.
60 ವರ್ಷ ಪ್ರಾಯ ದಾಟಿದವರು, ಹಾಸುಗೆ ಹಿಡಿದ ರೋಗಿಗಳು, ಗಂಭೀರ ರೋಗಗಳಿಂದ ಬಳಲುತ್ತಿರುವವರು, ಮೊದಲಾದ ಆದ್ಯತೆ ಪಟ್ಟಿಯಲ್ಲಿರುವವರಿಗೆ ಸೂಕ್ತ ಸಮಯದಲ್ಲಿ ಲಸಿಕೆ ನೀಡಿಕೆ ಪೂರ್ತಿಗೊಳಿಸಲಾಗುವುದು. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅತೀವ ಜಾಗರೂಕತೆ ಪಾಲಿಸುವಂತೆ ವಿನಂತಿಸಲಾಗಿದೆ.
ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಕೋವಿಡ್ ರೋಗಿಗಳ ಸಂಪರ್ಕ ಮಾಹಿತಿ ಸಿದ್ಧಗೊಳಿಸುವಲ್ಲಿ ಶಿಕ್ಷಕರ ಸೇವೆ ಬಳಸಲಾಗುವುದು. ಈ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ದಕ್ಷತೆಯಿಂದ ನಡೆಯುತ್ತಿದೆ. ಯಾವುದೇ ಪಕ್ಷಭೇದಗಳಿಲ್ಲದೆ ವಾಕ್ಸಿನೇಷನ್ ವಿತರಣೆ ನಡೆಸಲು ಆರೋಗ್ಯ ಇಲಾಖೆಗೆ ಆದೇಶ ನೀಡಲಾಗಿದೆ. ಡಾಟಾ ಎಂಟ್ರಿ ಅನಿವಾರ್ಯವಾದಲ್ಲಿ ಸರಕಾರಿ ಸಿಬ್ಬಂದಿಯ ಸೇವೆ ಬಳಸಲಾಗುವುದು ಎಂದು ಸಭೆ ನಿರ್ಧರಿಸಿದೆ.
ಕ್ವಾರೆಂಟೈನ್ ಆದೇಶ ಉಲ್ಲಂಘಿಸುವವರ ವಿರುದ್ಧ ಪೆÇಲೀಸ್ ಕ್ರಮ ಪ್ರಬಲಗೊಳಿಸಲಾಗಿದೆ. ರೋಗ ಖಚಿತತೆ ಗಣನೆ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಸರಕಾರಿ ಕಾರ್ಯಕ್ರಮಗಳ ಸಹಿತ ಸಭೆ, ಸಮಾರಂಭಗಳಿಗೆ ಅನುಮತಿಯಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಮೈಕ್ರೋ ಕಂಟ್ಮೆನ್ಮೆಂಟ್ ಝೋನ್ ಗಳ ಸಹಿತ ಪ್ರದೇಶಗಳಲ್ಲಿ ಸೆಕ್ಟರಲ್ ಮೆಜಿಸ್ಟ್ರೇಟ್ ಗಳ ನೇಮಕ ನಡೆಸಲಾಗುವುದು. ಜನಜಂಗುಳಿ ಸಾಧ್ಯತೆಯ ವ್ಯಾಪಾರ ಸಂಸ್ಥೆಗಳು ಮೊದಲಾದೆಡೆ ಅತೀವ ಜಾಗ್ರತೆ ಪಾಲಿಸಬೇಕು ಎಂದು ಆದೇಶಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಧಿಕಾರಿ ಎ.ಕೆ.ರಮೇಂದ್ರನ್, ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಕೆ.ಆರ್.ರಾಜನ್, ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಪೆÇ್ರೀಗ್ರಾಂ ಮೆನೆಜರ್ ಡಾ.ಎ.ವಿ.ರಾಮದಾಸ್, ಸ್ಪಷಲ್ ಬ್ರಾಂಚ್ ಡಿ.ವೈ,ಎಸ್.ಪಿ. ಕೆ.ಸುಧಾಕರನ್, ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.




