HEALTH TIPS

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಲ್ಲಿ ಬಾರ್ ಆರಂಭಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು: ಕ್ರಿಶ್ಚಿಯನ್ ಮದ್ಯಪಾನ ವಿರೋಧಿ ಸಮಿತಿ

                                                        

                                ಕೊಚ್ಚಿ: ಬಸ್ ನಿಲ್ದಾಣದ ಮೂಲಕ ಮದ್ಯ ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇರಳ ಜಂಟಿ ಕ್ರಿಶ್ಚಿಯನ್ ಮದ್ಯಪಾನ ನಿಷೇಧ ಸಮಿತಿ ಹೇಳಿದೆ. ಉಸ್ತುವಾರಿ ಸಾರಿಗೆ ಸಚಿವರು ಈ ರೀತಿ ಹೇಳಿಕೆ ನೀಡಿರುವುದು ಆಕ್ಷೇಪಾರ್ಹ ಎಂದು ಸಮಿತಿ ಹೇಳಿದೆ.

                   ಸಮಿತಿಯು ಪ್ರತಿಭಟನೆಯನ್ನು ಸರ್ಕಾರಕ್ಕೆ ತಿಳಿಸಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ  ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಸಮಿತಿ ಆರೋಪಿಸಿದೆ. ಸಮಿತಿಯ ರಾಜ್ಯಾಧ್ಯಕ್ಷರು ಮತ್ತು ಪಾಲ ಧರ್ಮಪ್ರಾಂತದ ಸಹಾಯಕ ಬಿಷಪ್ ಮಾರ್ ಜೇಕಬ್ ಮುರಿಕ್ಕನ್ ಮತ್ತು ಸಿಎಸ್‍ಐ ಕೇಂದ್ರ ಧರ್ಮಪ್ರಾಂತ್ಯದ ಬಿಷಪ್ ಡಾ ಮಲೀಲ್ ಸಾಬು ಕೋಶಿ ಚೆರಿಯನ್ ಇದ್ದರು.

                    ಕೆಸಿಬಿಸಿ ಮದ್ಯ ವಿರೋಧಿ ಸಮಿತಿಯು ಸಚಿವ ಆಂಟನಿ ರಾಜು ಕೆಎಸ್‍ಆರ್‍ಟಿಸಿ ಸ್ಟ್ಯಾಂಡ್‍ನಲ್ಲಿ ಮದ್ಯದ ಅಂಗಡಿಗಳನ್ನು ಪ್ರಾರಂಭಿಸುವ ಕಾಣುತ್ತಿರುವ ಕನಸು ಭ್ರಮೆಯಾಗಿದೆ. ಮದ್ಯದ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿರುವಾಗ, ಮದ್ಯದ ವಿತರಣೆಗೆ ಸರ್ಕಾರ ಮತ್ತೊಂದೆಡೆ ಅನುಕೂಲ ಮಾಡಿಕೊಡುವುದು ಸರಿಯಲ್ಲ. ಸಚಿವರ ಈ ನಡೆ ಸರಪಳಿಗೆ ಹುಚ್ಚಹಿಡಿದಂತ ಸ್ಥಿತಿ ಎಂದು ಮದ್ಯ  ವಿರೋಧಿ ಸಮಿತಿ ಹೇಳಿದೆ.

                  ಆದಾಗ್ಯೂ, ಶಾಸಕ ಗಣೇಶ್ ಕುಮಾರ್ ಅವರು ಕೆಎಸ್‍ಆರ್‍ಟಿಸಿ ಡಿಪೆÇೀಗಳಲ್ಲಿ ಬಿವರೇಜ್ ಮಳಿಗೆಗಳನ್ನು ಸ್ಥಾಪಿಸಲು ಬೆಂಬಲ ಸೂಚಿಸಿದ್ದರು. ಕೊಟ್ಟಾರಕ್ಕರ  ಖಾಸಗಿ ಬಸ್ ನಿಲ್ದಾಣದ ಒಳಗೆ ಬಿವರೇಜಸ್  ಔಟ್ಲೆಟ್ ಇದೆ. ಯಾವುದೇ ಬಾರ್‍ಗಳಿಲ್ಲದ ವಿಮಾನ ನಿಲ್ದಾಣಗಳಿವೆಯೇ? ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಾರ್ ಗಳಿದ್ದರೆ, ಕೆಎಸ್ ಆರ್ ಟಿಸಿಗೆ ಅದರ ಬಾಡಿಗೆ ಸಿಗುತ್ತದೆ” ಎಂದು ಕೆಬಿ ಗಣೇಶಕುಮಾರ್ ಹೇಳಿದ್ದರು.

                 " ನಷ್ಟದಲ್ಲಿರುವ ಕೆಎಸ್‍ಆರ್‍ಟಿಸಿ ಕೂಡ ಓಡಲಿ. ಟಿಕೆಟ್ ಆದಾಯವನ್ನು ಹೊರತುಪಡಿಸಿ ಇತರ ಯಾವುದೇ ಆದಾಯವನ್ನು ಗಳಿಸಲು ಪ್ರಯತ್ನಿಸುವವರನ್ನು ಟೀಕಿಸುವುದು ಸರಿಯಲ್ಲ ಎಂದು ಗಣೇಶಕುಮಾರ್ ಹೇಳಿದ್ದರು.

                 ಇದೇ ವೇಳೆ, ಕೆಎಸ್‍ಆರ್‍ಟಿಸಿ ಡಿಪೆÇೀಗಳಲ್ಲಿ ಖಾಲಿ ಇರುವ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಎಲ್ಲಾ ಇಲಾಖೆಗಳಿಗೆ ತಿಳಿಸಲಾಗಿದೆ. ಬೆವ್ಕೋಗೆ ಇದೇ ರೀತಿ ಮಾಹಿತಿ ನೀಡಲಾಗಿದೆ. ಬೆವ್ಕೊ ಕೆಎಸ್‍ಆರ್‍ಟಿಸಿ ಬಾಡಿಗೆ ಕಟ್ಟಡದಲ್ಲಿ ಬೆವ್ಕೊ ಆರಂಭಿಸುವ ಉದ್ದೇಶವನ್ನು ಪ್ರಕಟಿಸಿದೆ. ಮದ್ಯ ಮಾರಾಟದಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೆಎಸ್‍ಆರ್‍ಟಿಸಿಯ ಟಿಕೆಟ್ ರಹಿತ ಆದಾಯವನ್ನು ಹೆಚ್ಚಿಸಲು ಈ ಕ್ರಮ ಎಂದು ಸಚಿವ ಆಂಟನಿ ರಾಜು ಹೇಳಿದರು. ಕುಳಿತುಕೊಳ್ಳಲು ಮತ್ತು ಕುಡಿಯಲು ಸ್ಥಳವನ್ನು ಒದಗಿಸುವುದಿಲ್ಲ. ಆದ್ದರಿಂದ, ಇತರ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries