HEALTH TIPS

ಡೀಸೆಲ್ ಬೆಲೆ ಏರಿಕೆ: ಕನಿಷ್ಠ ಪ್ರಯಾಣ ದರ 12 ರೂ. ಹೆಚ್ಚಿಸಲು ಬಸ್ ಮಾಲೀಕರಿಂದ ಒತ್ತಡ: ಒಪ್ಪಿಗೆ ನೀಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ

                         ತಿರುವನಂತಪುರಂ: ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಬಸ್ ಮಾಲೀಕರು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಕನಿಷ್ಠ ಬಸ್  ಕನಿಷ್ಠ ದರವನ್ನು 12 ರೂ.ಗೆ ಹೆಚ್ಚಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಖಾಸಗಿ ಬಸ್ ಮಾಲೀಕರು ತೀರ್ಮಾನಿಸಿದ್ದಾರೆ. 

                    ಕೋವಿಡ್  ಸಾಂಕ್ರಾಮಿಕ ಮತ್ತು ಲಾಕ್‍ಡೌನ್‍ನಿಂದಾಗಿ ಬಸ್ ಉದ್ಯಮವು ಬಿಕ್ಕಟ್ಟಿನಲ್ಲಿದೆ ಎಂದು ಬಸ್ ಮಾಲೀಕರು ಹೊಸ ಬೇಡಿಕೆ ಮುಂದಿರಿಸಿದ್ದಾರೆ. ಕೇರಳದಲ್ಲಿ ಕೊನೆಯ ಬಾರಿಗೆ ಬಸ್ ಪ್ರಯಾಣ ದರವನ್ನು ಮೂರು ವರ್ಷಗಳ ಹಿಂದೆ ಹೆಚ್ಚಿಸಲಾಗಿತ್ತು. 2018ರ ಮಾರ್ಚ್‍ನಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿದಾಗ ಲೀಟರ್ ಡೀಸೆಲ್ ಬೆಲೆ ಕೇವಲ 66 ರೂ. ಇತ್ತು. ದೇಶದಲ್ಲಿ ಡೀಸೆಲ್ ಬೆಲೆ ಒಂದೇ ವರ್ಷದಲ್ಲಿ 26.58 ಕೋಟಿ ರೂ. ಹೆಚ್ಚಳಗೊಂಡಿದೆ.  ಬಸ್‍ಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರಯಾಣಿಕರು ಸ|ಂಚರಿಸಬೇಕು ಎಂಬುದರ ಭಾಗವಾಗಿ ಸರ್ಕಾರವು ಕೋವಿಡ್ ಅವಧಿಯಲ್ಲಿ ಕಿಲೋಮೀಟರ್‍ಗೆ 20 ಪೈಸೆ ಹೆಚ್ಚಳವನ್ನು ಅನುಮತಿಸಿದೆ. ಆದರೆ ಇದು ಸಾಕಾಗದು ಎಂದು ಬಸ್ ಮಾಲೀಕರು ಗಮನಸೆಳೆದಿದ್ದಾರೆ.

               ಆದಾಗ್ಯೂ, ಬಸ್ ಮಾಲೀಕರ ಅಗತ್ಯಗಳನ್ನು ಪೂರೈಸಲು ಕಳೆದ ವರ್ಷದ ಜುಲೈನಲ್ಲಿ ಕನಿಷ್ಠ ದರ ರೂಟ್ ನ್ನು  ಪರಿಷ್ಕರಿಸಲಾಯಿತು. ಕನಿಷ್ಠ ಚಾರ್ಜ್ ದೂರವನ್ನು ಐದು ಕಿಲೋಮೀಟರ್‍ಗಳಿಂದ ಎರಡೂವರೆ ಕಿಲೋಮೀಟರ್‍ಗಳಿಗೆ ಇಳಿಸಲಾಗಿದೆ.

                    ಕನಿಷ್ಠ ಶುಲ್ಕ ಹೆಚ್ಚಳದ ಜತೆಗೆ ವಿದ್ಯಾರ್ಥಿಗಳ ಪ್ರಯಾಣ ದರವನ್ನು ಸಕಾಲಿಕವಾಗಿ ಪರಿಷ್ಕರಿಸಬೇಕು ಎಂದು ಬಸ್ ಮಾಲೀಕರು ಒತ್ತಾಯಿಸಿದ್ದಾರೆ. ಬಸ್ ಮಾಲೀಕರು ವಿದ್ಯಾರ್ಥಿಗಳಿಗೆ ಕನಿಷ್ಠ 6 ರೂ.ಗಳ ದರವನ್ನು ವಿಧಿಸಲು ಬೇಡಿಕೆ ಇರಿಸಿದ್ದಾರೆ.  ಜೊತೆಗೆ ಸರ್ಕಾರದಿಂದ ತೆರಿಗೆ ವಿನಾಯಿತಿಯನ್ನು ಕೋರಿದೆ. ಬಿಡಿ ಭಾಗಗಳ ಬೆಲೆ ಏರಿಕೆ ಹಾಗೂ ವಿಮಾ ದರ ಹೆಚ್ಚಳದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಾಮಚಂದ್ರನ್ ಆಯೋಗ ಮಾಡಿರುವ ಶಿಫಾರಸನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಬಸ್ ಮಾಲೀಕರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಅನುಕೂಲಕರ ಪರಿಸ್ಥಿತಿ ಇಲ್ಲದಿದ್ದಾಗ ಬಸ್ ಮಾಲೀಕರು ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

                 ಒಂದು ತಿಂಗಳ ಹಿಂದೆ ಬಸ್ ಮಾಲೀಕರು ಪ್ರಯಾಣ ದರ ಏರಿಕೆ ಕೋರಿ ಸಾರಿಗೆ ಸಚಿವ ಆಂಟನಿ ರಾಜು ಅವರಿಗೆ ಮನವಿ ಸಲ್ಲಿಸಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಖಾಸಗಿ ಬಸ್ ಉದ್ಯಮವು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಅನೇಕ ಬಸ್‍ಗಳು ರಸ್ತೆಗಿಳಿದಿಲ್ಲ ಎಂದು ಮಾಲೀಕರು ಗಮನಸೆಳೆದರು. ಪ್ರಸ್ತುತ ಕೇವಲ ಶೇ .60 ರಷ್ಟು ಬಸ್ಸುಗಳು ಮಾತ್ರ ಸೇವೆಯಲ್ಲಿವೆ ಮತ್ತು ನಷ್ಟದಿಂದಾಗಿ ಇತರ ಬಸ್ ಗಳು ಸಂಚರಿಸುತ್ತಿಲ್ಲ. ವಿದ್ಯಾರ್ಥಿಗಳ ಪ್ರಯಾಣ ದರ ಏರಿಕೆ ವಿಚಾರವಾಗಿ ಬಸ್ ಮಾಲೀಕರು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅವರ ಪ್ರಸ್ತಾಪವು ಆಗಸ್ಟ್ 30 ರ ಮೊದಲು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries