ತಿರುವನಂತಪುರಂ: ರಾಜ್ಯದಲ್ಲಿ ಇಂದು 9361 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1552, ತಿರುವನಂತಪುರ 1214, ಕೊಲ್ಲಂ 1013, ತ್ರಿಶೂರ್ 910, ಕೊಟ್ಟಾಯಂ 731, ಕೋಝಿಕ್ಕೋಡ್ 712, ಇಡುಕ್ಕಿ 537, ಮಲಪ್ಪುರಂ 517, ಪತ್ತನಂತಿಟ್ಟ 500, ಕಣ್ಣೂರು 467, ಆಲಪ್ಪುಳ 390, ಪಾಲಕ್ಕಾಡ್ 337, ವಯನಾಡ್ 310 ಮತ್ತು ಕಾಸರಗೋಡು 171 ಎಂಬಂತೆ ಕೋವಿಡ್ ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 80,393 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿರುವ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್ಗಳಿವೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,81,286 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 2,72,412 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 8,874 ಮಂದಿ ಆಸ್ಪತ್ರೆ ಮೇಲ್ವಿಚಾರಣೆಯಲ್ಲಿದ್ದಾರೆ. ಒಟ್ಟು 825 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 80,892 ಕೋವಿಡ್ ಪ್ರಕರಣಗಳಲ್ಲಿ ಕೇವಲ 9.8 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕೋವಿಡ್ ಬಾಧಿಸಿ ಕಳೆದ 24 ಗಂಟೆಗಳಲ್ಲಿ 99 ಮಂದಿ ಮೃತಪಟ್ಟಿದ್ದಾರೆ. ಇದರ ಜೊತೆಗೆ, ಕಳೆದ ವರ್ಷ ಜೂನ್ 14 ರವರೆಗೆ 292 ಸಾವುಗಳು ಸೂಕ್ತ ದಾಖಲೆಗಳ ಕೊರತೆಯಿಂದ ವರದಿಯಾಗಿರಲಿಲ್ಲ. ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಅನುಸಾರ 172 ಸಾವುಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆಯನ್ನು 27,765 ಕ್ಕೆ ಹೆಚ್ಚಳಗೊಳಿಸಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 39 ಮಂದಿ ಜನರು ಹೊರ ರಾಜ್ಯದವರು. 9012 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 254 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 56 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 9401 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1309, ಕೊಲ್ಲಂ 532, ಪತ್ತನಂತಿಟ್ಟ 183, ಅಲಪ್ಪುಳ 401, ಕೊಟ್ಟಾಯಂ 491, ಇಡುಕ್ಕಿ 626, ಎರ್ನಾಕುಳಂ 1891, ತ್ರಿಶೂರ್ 1121, ಪಾಲಕ್ಕಾಡ್ 437, ಮಲಪ್ಪುರಂ 556, ಕೋಝಿಕ್ಕೋಡ್ 1004, ವಯನಾಡ್ 141, ಕಣ್ಣೂರು 519 ಮತ್ತು ಕಾಸರಗೋಡು 190 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 80,892 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 47,88,629 ಮಂದಿ ಇಲ್ಲಿಯವರೆಗೆ ಕೋವಿಡ್ನಿಂದ ಮುಕ್ತರಾಗಿದ್ದಾರೆ.