HEALTH TIPS

ವಿದ್ವಾನ್ ಬ್ರಹ್ಮಶ್ರೀ ಡಾ.ಮಾಧವ ಉಪಾಧ್ಯಾಯ ಬಳ್ಳಪದವು ಅವರಿಗೆ ಗುರು ನಮನ

  

                ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷದ ಅಂಗವಾಗಿ ವಿದ್ವಾನ್ ಬ್ರಹ್ಮಶ್ರೀ ಡಾ.ಮಾಧವ ಉಪಾಧ್ಯಾಯ ಬಳ್ಳಪದವು ಅವರಿಗೆ ಅವರ ನುಳ್ಳಿಪ್ಪಾಡಿಯ ಸ್ವಗೃಹದಲ್ಲಿ ಗುರು ನಮನ ಸಲ್ಲಿಸಲಾಯಿತು.  

                      ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ವಾಮನ್ ರಾವ್ ಬೇಕಲ್-ಅಧ್ಯಾಪಕಿ ಸಂಧ್ಯಾರಾಣಿ ದಂಪತಿಗಳು ಡಾ.ಮಾಧವ ಉಪಾಧ್ಯಾಯ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗುರು ನಮನ ಸಲ್ಲಿಸಿದರು.   

                   ಕನ್ನಡ ಭವನದ ಅಧ್ಯಕ್ಷ ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಉಪನ್ಯಾಸಕ ಪ್ರಮೋದ್ ಭಾಗವಹಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಡಾ.ಮನೋಹರ್, ಅಧ್ಯಾಪಕಿ ಸರ್ವಮಂಗಳ ಪುಣಿಂಚಿತ್ತಾಯ, ಮುಳಿಯಾರು ಗ್ರಾಮ ಪಂಚಾಯತಿ ಸದಸ್ಯೆ ಅನೀಷಾ ಮನ್ಸೂರ್ ಮಲ್ಲ, ಕನ್ನಡ ಪತ್ರಕರ್ತ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಮುಂಬೈ ನಾವ ಶ್ರೀ ಮೂಕಾಂಬಿಕಾ ದೇವಸ್ಥಾನ ಟ್ರಸ್ಟ್  ಕಾರ್ಯದರ್ಶಿ ಸುರೇಶ್ ಕೋಟ್ಯಾನ್,  ಪಂಚಾಯತಿ ಸದಸ್ಯ  ಹರೀಶ್ ಗೋಸಾಡ, ಪೆÇ್ರ.ಎ.ಶ್ರೀನಾಥ್ ಕಾಸರಗೋಡು, ಜಗದೀಶ್ ಕೂಡ್ಲು, ನಟರಾಜ ಶರ್ಮ, ವಸಂತ ಬಾರಡ್ಕ, ವಿದ್ಯಾಗಣೇಶ್, ವಸಂತ ಕೆರೆಮನೆ, ಅಖಿಲೇಶ್ ಮೊದಲಾದವರು ಉಪಸ್ಥಿತರಿದ್ದರು. ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries