ಶಬರಿಮಲೆ: ಶಬರಿಮಲೆಯಲ್ಲಿ ಖಜಾನೆಯಿಂದ ಹಣ ಕದಿಯುತ್ತಿದ್ದ ಕಜಕಂ ದೇವಸ್ವಂ ನೌಕರನನ್ನು ವಿಜಿಲೆನ್ಸ್ ಬಂಧಿಸಿದ ಘಟನೆ ನಡೆದಿದೆ. ಎಣಿಕೆ ಮುಗಿಸಿ ಹಣದೊಂದಿಗೆ ಹೊರ ಬರುವ ವೇಳೆ ನಡೆದ ತಪಾಸಣೆ ಸಂದರ್ಭ ಸಿಕ್ಕಿಬಿದ್ದಿದ್ದಾನೆ. ದೇವಸ್ವಂ ವಿಜಿಲೆನ್ಸ್ ಶನಿವಾರ ಮಧ್ಯಾಹ್ನ ಚಂಗನಾಶ್ಶೇರಿ ಉಪ ಗುಂಪಿನ ನೌಕರ ಉಣ್ಣಿ ಎಂಬವನನ್ನು ಬಂಧಿಸಿದೆ.