HEALTH TIPS

ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಅಧ್ಯಕ್ಷ ಟಿ.ನಾಝರುದ್ದೀನ್ ನಿಧನ

                                           

                          ಕೋಝಿಕ್ಕೋಡ್: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಅಧ್ಯಕ್ಷ ಟಿ ನಾಝರುದ್ದೀನ್(78) ನಿನ್ನೆ ರಾತ್ರಿ ನಿಧನರಾದರು. ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯಾಘಾತದಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗುರುವಾರ ರಾತ್ರಿ 10.30ರ ಸುಮಾರಿಗೆ ಸಾವು ಸಂಭವಿಸಿದೆ.

                   1944 ರ ಡಿಸೆಂಬರ್ 25 ರಂದು ಟಿ.ಕೆ. ಮುಹಮ್ಮದ್ ಮತ್ತು ಅಸ್ಮಾಬಿಯ ದಂಪತಿಗಳ ಪುತ್ರನಾಗಿ ಜನಿಸಿದ್ದ ಅವರು ವಿದ್ಯಾಭ್ಯಾಸ ಮುಗಿಸಿ ವ್ಯಾಪಾರ ಜಗತ್ತಿಗೆ ಕಾಲಿಟ್ಟರು. ಅವರು ಕ್ಯಾಂಡಿ ಸ್ಟ್ರೀಟ್‍ನಲ್ಲಿರುವ ಸೌಂದರ್ಯವರ್ಧಕ ಅಂಗಡಿಯ ಮಾಲೀಕರಾಗಿದ್ದರು. ಅವರು 1980 ರಲ್ಲಿ ಮಲಬಾರ್ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಸಾಮಾಜಿಕ ವೃತ್ತಿಜೀವನವನ್ನು ಪ್ರಾರಂಭಿಸಿದ್ದÀರು.

                  1991ರಿಂದ ಕೆವಿವಿಇಎಸ್ ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಚೇಂಬರ್ ಆಫ್ ಕಾಮರ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ, ವ್ಯಾಟ್ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದಾರೆ, ವ್ಯಾಪಾರಿ ಕಲ್ಯಾಣ ನಿಧಿಯ ಉಪಾಧ್ಯಕ್ಷರು, ಬ್ಯಾಂಕ್ ಆಫ್ ಕೇರಳ ಮಕೆರ್ಂಟೈಲ್ ಅಧ್ಯಕ್ಷರು ಮತ್ತು ವ್ಯಾಪಾರಿ ಮಳಿಗೆ ಕಲ್ಯಾಣ ನಿಧಿ ಮಂಡಳಿಯ ಸದಸ್ಯರಾಗಿದ್ದರು.  ಟಿ ನಾಸಿರುದ್ದೀನ್ ಅವರು ಕೇರಳದ ವರ್ತಕರ ಹಕ್ಕುಗಳ ಹೋರಾಟಕ್ಕೆ ಪ್ರಬಲ ನಾಯಕತ್ವವನ್ನು ನೀಡಿದ ನಾಯಕ. ಅಕಾಲಿಕ ಮರಣದ ಹಿನ್ನೆಲೆಯಲ್ಲಿ ದುಃಖ ಸೂಚಕವಾಗಿ ಇಂದು ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries