ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ ಸಾಂತ್ವನ ಬಡ್ಸ್ ಶಾಲೆಯ ಮಕ್ಕಳಿಗಾಗಿ ಸ್ನೇಹತೀರಂ ಚಾರಿಟೇಬಲ್ ಸೊಸೈಟಿ ಆಯೋಜಿಸಿದ "ಸ್ನೇಹ ಸಂಗಮ" ಕಾರ್ಯಕ್ರಮ ಪಂಚಾಯತಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಕಾರ್ಯಕ್ರಮ ಉದ್ಘಾಟಿಸಿದರು. ಸ್ನೇಹತೀರಂ ಚಾರಿಟೇಬಲ್ ಸೊಸೈಟಿಯ ಕಾರ್ಯದರ್ಶಿ ಮುರಳಿ ಕಣ್ಣೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಡಾ.ಸುರೇಶ್ ಕೆ.ಗುಪ್ತನ್, ತಸ್ನಿ ಫಾತಿಮಾ, ಮುಖ್ಯ ಅತಿಥಿಗಳಾಗಿದ್ಸರು. ಪಂ.ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್,ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಮಾಜಿ ಪಂ.ಉಪಾಧ್ಯಕ್ಷೆ ಆಯಿಷಾ ಎ.ಎ. ವ್ಯಾಪಾರಿ ಮುಂದಾಳು ರಾಜಾರಾಮ್ ಪೆರ್ಲ,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ,ಶಾಲಾ ಶಿಕ್ಷಕಿ ಮರಿಯಾಂಬಿ ಸ್ವಾಗತಿಸಿ ಜ್ಯೋತಿ ವಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ತಿಳುವಳಿಕಾ ಕಾರ್ಯಗಾರ ನಡೆಸಲಾಯಿತು.