ಇಡುಕ್ಕಿ; ಇಡುಕ್ಕಿಯಲ್ಲಿ ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.ಸೂರ್ಯನೆಲ್ಲಿ ತಿರುವಳ್ಳುವರ್ ಕಾಲೋನಿಯಲ್ಲಿ ಕಾಡಾನೆ ದಾಳಿ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ.
ಜಿಂಕುಕಂಡಂ ಚೆಕ್ ಡ್ಯಾಂ ರಸ್ತೆ ಬಳಿ ಇರುವ ಬಾಬು ಅವರ ಮನೆಯ ಸಮೀಪ ದಾಳಿ ಮಾಡಿದೆ.ನಡೆದು ಸಾಗುತ್ತಿದ್ದ ಬಾಬು ಅವರ ಹಿಂಬಂದಿಯಿಂದ ಧಾವಿಸಿದ ಆನೆ ತಿವಿದಿದೆ. ನಿನ್ನೆ ಮಧ್ಯರಾತ್ರಿ ಅರಣ್ಯದೊಳಗೆ ಘೀಳಿಡುವುದು ಕೇಳಿಬಂದಿದ್ದು ಮುಂಜಾನೆ ವಸತಿ ಪ್ರದೇಶಗಳತ್ತ ನುಗ್ಗಿ ಓರ್ವನನ್ನು ತಿವಿದು ಸಾಯಿಸಿದೆ.